ಹಾಸನ :-ಜಿಲ್ಲೆ ಆಲೂರು ತಾಲೂಕಿನ ಮೆಟ್ರಿಕ್ ಬಾಲಕರ ವಿದ್ಯಾರ್ಥಿ ನಿಲಯದ ವಾರ್ಡನ್ ದೇವರಾಜ್ ಎಂಬುವವರು ಇದೇ ವಿದ್ಯಾರ್ಥಿ ನಿಲಯದಲ್ಲಿ ಸುಮಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು ಇವರು ಸ್ವಂತ ತಮ್ಮ ಕಾರಿನಲ್ಲಿ 50 ಕೆಜಿ ಅಕ್ಕಿಯನ್ನು ಕಳ್ಳ ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದಿದ್ದು ಇದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ – ಮತ್ತಷ್ಟು ಸ್ಪೋಟಕ ವಿಚಾರ ಬಯಲಿಗೆ!
ಹೌದು 50 ಕೆಜಿ ತೂಕದ ಅಕ್ಕಿಯ ಮೂಟೆಯನ್ನು ಇದೇ ಇಲಾಖೆಯ ಸಹಾಯಕ ಮನು ಎಂಬುವರ ಸಹಾಯದ ಮೂಲಕ ವಾರ್ಡನ್ ದೇವರಾಜ್ ಕಾರಿಗೆ ಸಾಗಿಸುವ ಮೂಲಕ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ.
ಇದರ ಹಿಂದೆ ಮೇಲಾಧಿಕಾರಿಯವರ ಸಹಾಯವಿರಬಹುದೇ…..? ಆದರೆ ಬೆಂಬಲವಿಲ್ಲದೆ ಹಾಸ್ಟೆಲಿನಲ್ಲಿ ಈ ರೀತಿ ಧೈರ್ಯವಾಗಿ ಯಾರು ಸಹ ಕಳ್ಳ ಸಾಗಾಣಿಕೆ ಮಾಡುವುದಿಲ್ಲ ಮೇಲಾಧಿಕಾರಿಗಳು ಕುಮುಕು ನೀಡಿರಬಹುದು…..? ಇಲ್ಲವೇ ಇವರೇ ಸ್ವ ಇಚ್ಚೆಯಿಂದ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರ? ಆದರೆ ಸರ್ಕಾರದಿಂದ ಬಂದಂತಹ ಆಹಾರಧಾನ್ಯವನ್ನು ದುರುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳಿಗೆ ಕಡಿಮೆ ಮೌಲ್ಯದ ಕಳಪೆ ಊಟ ನೀಡುವ ಮೂಲಕ ಸರ್ಕಾರಕ್ಕೆ ಕನ್ನ ಹಾಕುವುದು ಎಷ್ಟರಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಯಕ್ಷಪ್ರಶ್ನೆಯಾಗಿದೆ.
ಇಲಾಖೆಗೆ ಸಂಬಂಧಪಟ್ಟ ಆಲೂರು ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಲಿಂಗರಾಜ್ ಅವರಿಗೆ ಫೋನ್ ಕರೆ ಮಾಡಿ ಮಾತನಾಡಿಸಿದ ವೇಳೆ ನನ್ನನ್ನು ಜಿಲ್ಲಾಧಿಕಾರಿಯವರು ಚುನಾವಣೆಯ ಕಾರ್ಯಕ್ಕೆ ನೇಮಿಸಿದ್ದಾರೆ ನಾನು ಅನುಪಸ್ಥಿತಿಯಲ್ಲಿದ್ದಾಗ ಇಂತಹ ಕೃತ್ಯ ನಡೆದಿರುತ್ತದೆ ಮೇಲಾಧಿಕಾರಿ ಅವರಿಗೆ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು.
ಆದರೆ ಆಲೂರು ತಾಲೂಕಿನ ಹಾಸ್ಟೆಲುಗಳಲ್ಲಿ ಇಷ್ಟು ವರ್ಷದಿಂದ ಇಲ್ಲದಿರುವ ಕಳ್ಳ ಸಾಗಾಣಿಕೆಗಳು ಸಹಾಯಕ ನಿರ್ದೇಶಕ ಲಿಂಗರಾಜ್ ಬಂದ ಮೇಲೆ ಇಂತಹ ಕೃತ್ಯಗಳು ಬೆಳಕಿಗೆ ಬರುತ್ತಿದ್ದಾವೆ ಎಂದರೆ ಇವರಿಗೂ ಹಾಸ್ಟೆಲ್ ವಾರ್ಡನ್ ಗಳಿಗೂ ತುಂಬಾನೇ ಸಂಬಂಧ ಗಟ್ಟಿಯಾಗಿರಬೇಕು ಇಲ್ಲವೇ ವಾರ್ಡನ್ ಗಳಿಗೆ ಕೊಟ್ಟಂತಹ ಸಲುಗೆ ಅತಿ ಆಯಿತೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ ಇಂತಹ ಕಳ್ಳ ಸಾಗಾಣಿಕೆಗಳು ಎಷ್ಟರಮಟ್ಟಿಗೆ ಕೊನೆ ಗೊಳ್ಳುತ್ತಾದ್ದೆ ಎಂಬುದನ್ನು ಕಾದು ನೋಡಬೇಕಾಗಿದೆ.