ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಟಿಕೋಳಿ ಸಾರು ಮುದ್ದೆ ಊಟದ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಪಿಜ್ಜಾ, ಬರ್ಗರ್ ನೂಡಲ್ಸ್ ಬಿಡಿ, ರಾಗಿ ಗಂಜಿ, ರಾಗಿ ಮುದ್ದೆ ತಿಂದು ಆರೋಗ್ಯವಾಗಿರಿ ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಬ್ಲಡ್ ಶುಗರ್ ನಾರ್ಮಲ್ ಆಗ್ಬೇಕಾ!? ಹಾಗಿದ್ರೆ ರಾತ್ರಿ ಊಟಕ್ಕೆ ಇದೊಂದು ತರಕಾರಿ ಸೇವಿಸಿ! ರಿಸಲ್ಟ್ ಗ್ಯಾರಂಟಿ!
ರಾಗಿ ಮುದ್ದೆ ನಾಟಿ ಕೋಳಿ ಸಾರು ಸವಿಯುವ ಮೂಲಕ ಶಾಸಕ ಸತೀಶ್ ರೆಡ್ಡಿ ಉದ್ಘಾಟನೆ ಮಾಡಿದ್ದಾರೆ. ದಶಮುಖ ಸಾಮಾಜಿಕ ಸೇವಾ ಟ್ರಸ್ಟ್ 8ನೇ ವಾರ್ಷಿಕೋತ್ಸವ ಅಂಗವಾಗಿ ಬೆಂಗಳೂರಿನ ಬಿಳೇಕಹಳ್ಳಿ, ಮುಲ್ಕಿ ಸುಂದರಾಮ್ ಮೆಮೊರಿಯಲ್ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮವನ್ನು ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ನಿಚ್ಚಲಾನಂದನಾಥ ಸ್ವಾಮೀಜಿ ಅವರು, ಉದ್ಘಾಟನೆ ಮಾಡಿದ್ದಾರೆ. ರಾಘವ ಚರಿತ್ರೆಯಲ್ಲಿ ರಾಗಿಗೆ ರಾಮಧಾನ್ಯ ಎನ್ನುತ್ತಾರೆ. ರಾಗಿಮುದ್ದೆಗೆ ದೇಹದ ಶಕ್ತಿ ಹಿಡಿಯುವ ಶಕ್ತಿ ಇದೆ ಎಂದು ಇದೇ ವೇಳೆ ಶ್ರೀ ನಚ್ಚಲಾನಂದ ಸ್ವಾಮೀಜಿ ಹೇಳಿಕೆ ಕೊಟ್ಟಿದ್ದಾರೆ.
ರಾಗಿಯ ಮಹತ್ವ ಮತ್ತು ರಾಗಿ ಮುದ್ದೆ ಸೇವನೆ ಆರೋಗ್ಯ ಕಾಳಜಿಗಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.