ವಿಜಯಪುರ: ಪ್ರಜ್ವಲ್ ರೇವಣ್ಣ ಕೇಸ್ನ ತನಿಖೆ ಮಾಡುತ್ತಿರುವ ಎಸ್ಐಟಿ ಡಿಕೆ ಶಿವಕುಮಾರ್ ಏಜೆಂಟ್ಸ್ ರೀತಿ ವರ್ತಿಸುತ್ತಿದೆ. ಹೀಗಾಗಿ, ನ್ಯಾಯ ಸಿಗಲ್ಲ. ಈ ಕೇಸ್ ಅನ್ನು ಸಿಬಿಐಗೆ ವಹಿಸಬೇಕು ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿ, ” ದೇಶ ರಾಜ್ಯ ಮನೆ ಸುರಕ್ಷಿತವಾಗಬೇಕೆಂದರೆ ಮೋದಿ ಮತ್ತೇ ಪ್ರಧಾನಿಯಾಗಬೇಕು. ದೇಶದ ಉಳುವಿಗಾಗಿ ಶೇಕಡ 80ರಷ್ಟಾದರೂ ಜನರು ಮತದಾನ ಮಾಡಬೇಕು” ಎಂದರು.
ಇದೇ ವೇಳೆ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಮಾತನಾಡಿ, ” ರಾಜ್ಯದ ಎಸ್ಐಟಿ ತಂಡದಿಂದ ನ್ಯಾಯ ಸಿಗುವುದಿಲ್ಲ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಎಸ್ಐಟಿ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರ ಏಜೆಂಟ್ಗಳಂತೆ ವರ್ತಿಸುತ್ತಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು” ಎಂದು ಆಗ್ರಹಿಸಿದರು.
ರೈತರೇ ಗಮನಿಸಿ.. ಸಪೋಟ ಹಣ್ಣಿನ ಕೃಷಿಯಿಂದ ಗಳಿಸಬಹುದು ಲಕ್ಷಗಟ್ಟಲೇ ಆದಾಯ..!
‘ಇದನ್ನು ಮಾಡಿದವರು ಯಾರು ಎಂದು ದೇವರಾಜೇಗೌಡಾ ಸ್ಪಷ್ಟವಾಗಿ ಹೇಳಿದ್ದಾರೆ. ಆಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಎಸ್ಐಟಿಯಲ್ಲಿ ಇರುವ ಅಧಿಕಾರಿಗಳೆಲ್ಲ ಡಿಕೆ ಶಿವಕುಮಾರ್ ಕಂಟ್ರೋಲ್ನಲ್ಲಿ ಇರುವವರು. ಮೊದಲೆ ಹೇಳಿದ್ದೆ ರಾಜ್ಯದಲ್ಲಿ ಎರಡು ಸಿಡಿ ಫ್ಯಾಕ್ಟರಿ ಇದೆಯಂತಾ. ಇದೊಂದು ಓಪನ್ ಆಗಿದೆ, ಇನ್ನೊಂದು ಓಪನ್ ಆಗುತ್ತದೆ” ಎಂದರು.