ಗದಗ:- ನರೇಗಾ ಯೋಜನೆಯಡಿ ಕೆಲಸ ನೀಡದ ಹಿನ್ನೆಲೆ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಜಂತ್ಲಿ-ಶಿರೂರು ಗ್ರಾಮದಲ್ಲಿ ಜರುಗಿದೆ
‘ಕೈ” ಸರ್ಕಾರದ ರೈತ ವಿರೋಧಿ ನಿಲುವು…ಬಿಜೆಪಿ ಕಾರ್ಯಕರ್ತರಿಂದ ಪ್ರೊಟೆಸ್ಟ್!
ಸಲಿಕೆ, ಗುದ್ದಲಿ, ಬುಟ್ಟಿಗಳ ಸಮೇತ ಗ್ರಾಮ ಪಂಚಾಯತಗೆ ಮುತ್ತಿಗೆ ಹಾಕಲಾಗಿದೆ. ಕೆಲಸದ ನೀಡದ ಜಂತ್ಲಿ-ಶಿರೂರು ಗ್ರಾಮ ಪಂಚಾಯತ ಪಿಡಿಓ ವಸಂತ ಗೋಕಾವಿ ವಿರುಧ್ಧ ಆಕ್ರೋಶ ಹೊರ ಹಾಕಲಾಗಿದೆ. ಪ್ರತಿ ವರ್ಷ ಕನಿಷ್ಟ ನೂರು ದಿನ ಮಹಾತ್ಮಾ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಕೂಲಿ ಕೆಲಸ ನೀಡಬೇಕೆಂಬ ಆದೇಶವಿದೆ. ಆದ್ರೆ ಜಂತ್ಲಿ-ಶಿರೂರು ಗ್ರಾಮದಲ್ಲಿ ಕೇವಲ ಮೂರು ದಿನ ಕೆಲಸ ನೀಡಿ ಕೈ ತೊಳೆದುಕೊಂಡಿದ್ದಾರೆ ಅಂತಾ ಕಿಡಿಕಾರಿದ್ದಾರೆ. ನರೇಗಾ ಕೂಲಿ ಕಾರ್ಮಿಕರು ಕೆಲಸ ಕೇಳಿದ್ರೆ ಹಣವಿಲ್ಲ ಅಂತಾ ಪಿಡಿಓ ಸಬೂಬು ನೀಡ್ತಾರೆ ಅನ್ನೋ ಆರೋಪ ಮಾಡಲಾಗಿದೆ. ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಜಂತ್ಲಿ-ಶಿರೂರು ಗ್ರಾಮ ಪಂಚಾಯತ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ನರೇಗಾ ಕೂಲಿ ಕೆಲಸ ಸಿಗ್ತಿಲ್ಲ. ಒಂದು ಕಡೆ ಮಳೆ ಬಾರದೇ ಕಂಗಾಲಾಗಿದ್ದೇವೆ ಇನ್ನೊಂದೆಡೆ ನರೇಗಾ ಕೆಲಸ ಇಲ್ಲ. ಹೊಟ್ಟೆಗೆ ಏನು ತಿನ್ನಬೇಕು ನಾವು ಅಂತಾ ತಮ್ಮ ಅಳಲನ್ನ ಜನತೆ ತೋಡಿಕೊಂಡಿದ್ದಾರೆ.
ತಕ್ಷಣ ಮೇಲಾಧಿಕಾರಿಗಳು ಪಿಡಿಓ ಅಮಾನತ್ತು ಮಾಡಬೇಕು ಜೊತೆಗೆ 100 ದಿನ ನರೇಗಾ ಕೂಲಿ ಕೆಲಸ ನೀಡಬೇಕೆಂದು ಆಗ್ರಹಿಸಿದ್ದಾರೆ.