ಬೆಂಗಳೂರು:- ಬೆಂಗಳೂರು ಸಮಸ್ಯೆಗಳ ನಿವಾರಣೆಗೆ ಸಿಎಂ ಸಿದ್ದರಾಮಯ್ಯ ಅವರು ಬಿಡಿಗಾಸು ಬಿಚ್ಚಿಲ್ಲ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದ್ದಾರೆ.
Jackfruit Seeds: ಹಲಸಿನ ಹಣ್ಣಷ್ಟೇ ಅಲ್ಲ, ಅದರ ಬೀಜ ಸೇವನೆಯಿಂದಲೂ ಸಾಕಷ್ಟು ಲಾಭವಿದೆ.!
ಈ ಸಂಬಂಧ ಮಾತನಾಡಿದ ಅವರು, ಮಳೆಗಾಲ ಶುರುವಾಗುವ ಮೊದಲೇ ಮಳೆ ನೀರಿನಿಂದ ಅಗುವ ತೊಂದರೆಗಳ ನಿವಾರಣೆಗೆ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಕಮೀಶನರ್ ಒಂದು ತಿಂಗಳ ಹಿಂದೆ ಹೇಳಿದ್ದರು. ಎಲ್ಲಿದೆ ಸಿದ್ಧತೆ, ಯಾವ ರಾಜಾಕಾಲುವೆಯಿಂದ ಹೂಳೆತ್ತಲಾಗಿದೆ? ಎಂದು ಪ್ರಶ್ನಿಸಿದ ಅಶೋಕ ಎಲ್ಲ ಸಿದ್ಧತೆಗಳಾಗಿದ್ದರೆ ಮುಖ್ಯಮಂತ್ರಿಯವರು ಮೊನ್ನೆ ಸಿಟಿ ರೌಂಡ್ಸ್ ಗೆ ಹೋಗುವ ಅವಶ್ಯಕತೆ ಏನಿತ್ತು ಎಂದರು.
ಸಿದ್ದರಾಮಯ್ಯ ನಗರ ಪ್ರದಕ್ಷಿಣೆ ಹಾಕಿದ್ದು ಕೇವಲ ಫೋಟೋಶೂಟ್ ಗಾಗಿಯೇ ಹೊರತು ಮತ್ಯಾವುದಕ್ಕೂ ಅಲ್ಲ, ರಾಜಾ ಕಾಲುವೆಗಳಲ್ಲಿ ಹೂಳು ತುಂಬಿದೆ ರಸ್ತೆಗಳಲ್ಲಿ ಲಕ್ಷಾಂತರ ಗುಂಡಿಗಳು ಬಿದ್ದಿವೆ, ಅವುಗಳನ್ನು ಸರಿಪಡಿಸಲು ಮುಖ್ಯಮಂತ್ರಿಯವರು ಒಂದು ರೂಪಾಯಿಯನ್ನಾದರೂ ಬಿಡುಗಡೆ ಮಾಡಿದರೇ? ಎಂದು ಹೇಳಿಕೆ ನೀಡಿದ್ದಾರೆ.