ಬೆಂಗಳೂರು:- ಅಧಿಕಾರಿಗಳನ್ನು ಬಲಿಪಶು ಮಾಡುವ ಪ್ರಯತ್ನ ಮುಖ್ಯಮಂತ್ರಿ ಮಾಡ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಪತ್ನಿಗೆ ಕಿರುಕುಳ: ಸಂಧಾನಕ್ಕೆ ಬಂದ ಅತ್ತೆ-ಮಾವನ ಜೊತೆ ಹೆಂಡತಿಯನ್ನು ಕೊಂದ ಪಾಪಿ!
ಈ ಸಂಬಂಧ ಮಾತನಾಡಿದ ಅವರು,ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಭಾಷಣ ಮಾಡಿದ ಮುಖ್ಯಮಂತ್ರಿಯವರು, ಪಿ ಚಂದ್ರಶೇಖರನ್ ಅವರ ಡೆತ್ ನೋಟ್ ನಲ್ಲಿದ್ದ ಹೆಸರುಗಳ ಪೈಕಿ ಕೇವಲ ಅಧಿಕಾರಿಗಳ ಹೆಸರು ಮಾತ್ರ ಓದಿದರು. ಮಂತ್ರಿ ಮತ್ತು ಶಾಸಕಮ ಹೆಸರನ್ನು ತಮ್ಮ ಅನುಕೂಲಕ್ಕಾಗಿ ಮರೆಮಾಚಿದರು, ಅಸಲಿಗೆ ಅವರು ಡೆತ್ ನೋಟ್ ಸದನಲ್ಲಿ ಓದಿದ್ದೇ ಅಕ್ಷಮ್ಯ ಅಪರಾಧ ಎಂದರು.
ಅಧಿಕಾರಿಗಳನ್ನು ಬಲಿಪಶು ಮಾಡುವ ಪ್ರಯತ್ನ ಮುಖ್ಯಮಂತ್ರಿ ನಡೆಸಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದರು. ನಿಗಮದಿಂದ ಲೂಟಿ ಮಾಡಿದ ಹಣವನ್ನು ತೆಲಂಗಾಣ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಗೆ ಬಳ್ಳಾರಿ ಕ್ಷೇತ್ರದಲ್ಲಿ ಹೆಂಡ ಕೊಂಡು ಹಂಚಲು ಬಳಕೆಯಾಗಿದ್ದು ಬೆಳಕಿಗೆ ಬಂದಿದೆ ಎಂದರು.