ಚಿತ್ರದುರ್ಗ: ಈ ಜಿಲ್ಲೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಮಾಡುತ್ತಿದ್ದೇವೆ. ಹುಬ್ಬಳ್ಳಿ, ಮಂಡ್ಯ, ಹಾಸನದಲ್ಲಿ ಸದಸ್ಯತ್ವ ಅಭಿಯಾನ ಮುಗಿಸಿದ್ದೇವೆ. ಆಂದ್ರದಲ್ಲೂ ಇಂಚಾರ್ಜ್ ಇದ್ದೇನೆ, ಎರಡು ದಿನ ಪ್ರವಾಸ ಮಾಡಿದ್ದೇನೆ. ದೇಶದಲ್ಲಿ ನಡ್ಡಾ,ಪ್ರಧಾನಿ ಮೋದಿ ಪ್ರಜಾಪ್ರಭುತ್ವ ಮೆಂಬರ್ಶಿಪ್ ಪಾರ್ಟಿಯಾಗಬೇಕು. ಬೇರೆ ಪಾರ್ಟಿಗಳು ಕುಟುಂಬದ ಮೇಲೆ ನಡೆಯುತ್ತದೆ ಎಂದು ಚಿತ್ರದುರ್ಗದಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿಕೆ.
ಕಾಂಗ್ರೇಸ್ ಆ ಕುಟುಂಬ ಇದ್ದರೆ ಆ ಪಾರ್ಟಿ ಇರುತ್ತದೆ, ಆ ಕುಟುಂಬ ಏನಾದ್ರು ಪಲಾಯನ ಮಾಡಿದ್ರೆ ಕಾಂಗ್ರೇಸ್ ಪಾರ್ಟಿ ಇರಲ್ಲ. ನಮ್ಮ ಪಾರ್ಟಿ ಹಾಗಲ್ಲ, ದೀನ್ ದಯಾಳ್ ಉಪಾದ್ಯರಿಂದ ಹಿಡಿದುಪ್ರಧಾನಿ ವರೆಗೂ ಬದಲಾವಣೆ. ಇಲ್ಲಿ ಯಾರು ಕುಟುಂಬದವರು ಬರಲು ಸಾಧ್ಯವಿಲ್ಲ, ನಮ್ಮ ಜೀವ ಇರುವುದು ಕಾರ್ಯಕರ್ತರಲ್ಲಿ.
ಕರ್ನಾಟಕದಲ್ಲಿ 1 ಕೋಟಿಗೂ ಹೆಚ್ಚು ಸದಸ್ಯರಾಗಲು ಕೇಂದ್ರದ ಬಯಕೆ ಚಿತ್ರದುರ್ಗಕ್ಕೆ ನಾಲ್ಕೈದು ಜಿಲ್ಲೆಗಳು ಬರುತ್ತವೆ ಅವರಿಗೆ ಮಹತ್ವ ತಿಳಿಸುವೆ ಎಂದರು.
ಆರ್ ಅಶೋಕ್, ಹೆಚ್ಡಿಕೆ ಹುಚ್ಚರು ಎಂಬ ಸಚಿವ ಬೋಸರಾಜು ಹೇಳಿಕೆ ವಿಚಾರ ಬಗ್ಗೆಯೂ ಮಾತನಾಡಿ ಅಧಿಕಾರ, ಹಣ, ಅಂತಸ್ತು ಇದ್ದಾಗ ಈರಿತಿಯ ಮಾತುಗಳು ಬರುತ್ತವೆ ಆ ಮಾತುಗಳನ್ನ ಹೇಳಿ ಅವರ ಗೌರವ ಅವರೇ ಹಾಳು ಮಾಡಿಕೊಳ್ಳಬೇಕು ಕಾಂಗ್ರೇಸ್ನವರು ನೀವು ರಾಜಿನಾಮೆ ಕೊಡಲು ತಯಾರಿದ್ದೀರ ಎಂದು ನನ್ನ ಕೇಳಿದ್ದರು ನಾನು ರೆಡಿ ಇದ್ದೇನೆ ಎಂದು ಹೇಳಿದ್ದೇನೆ, 24 ಗಂಟೆ ಗಡುವು ಕೊಟ್ಟಿದ್ದೇನೆ.
14 ಜನ ಶಾಸಕರಿಗೆ ಆಮೀಶ, ಒಪ್ಪದಿದ್ದಾಗ ಇಡಿ ಬಳಕೆ ಎಂಬ ಆರೋಪ ವಿಚಾರ 14 ಜನ ಶಾಸಕರು ಯಾರು ಹೇಳಲಿ, CBI,ಲೋಕಾಯುಕ್ತಕ್ಕೆ ಕಂಪ್ಲೈಂಟ್ ಕೊಡಲಿ ಯಾವುದು ಇಷ್ಟವೋ ಅವರಿಗೆ ಕೊಡಲಿ, ಯಾರು ಎಷ್ಟು ಕಟ್ಟರು, ಯಾರು ಎಷ್ಟು ಇಸ್ಕೊಂಡ್ರು ಹೇಳಲಿ ನಾನು ವಿರೋಧ ಪಕ್ಷದ ನಾಯಕನಾಗಿ ಹೇಳುತ್ತಿದ್ದೇನೆ. ನಾವಂತು ಸರ್ಕಾರವನ್ನ ಬೀಳಿಸಲ್ಲ,
ಅದರ ಪಾಪದ ಕೊಡ ತುಂಬಿ ಬೀಳಬೇಕು ನಾವು ಸರ್ಕಾರ ಬೀಳಿಸುವ ಪ್ರಶ್ನೆಯೇ ಇಲ್ಲ ಪ್ರಯತ್ನವನ್ನೂ ಮಾಡಲ್ಲ.
ನಾವು ಚಾನಾವಣೆಗೆ ಹೋಗಿ ಗೆದ್ದು ಬರಬೇಕು ಎಂಬುದು ನಮ್ಮ ಇಚ್ಚೆ ಕಾಂಗ್ರೇಸ್ನವರು ಸುಮ್ ಸುಮ್ನೆ ಅಪಾದನೆ ಮಾಡುತ್ತಿದ್ದಾರೆ. ಅವರ ಪಕ್ಷದಲ್ಲೇ ನಾನು ಸಿಎಂ , ನಾನು ಸಿಎಂ ಎಂದು ಟವಲ್ ಹಾಕಿದ್ದಾರೆ. ಸಿದ್ದರಾಮಯ್ಯ ಗೆ ನಿಜವಾಗಿಯೂ ಅವರ ಪಾರ್ಟಿಯವರೇ ವಿರೋಧಿ ಅವರ ಪಾರ್ಟಿಯವರೇ ಮಸಲತ್ತು ಮಾಡಿದ್ದು, ಅವರೇ ವಿಪಕ್ಷಕಕ್ಕೆ ದಾಖಲೆ ಕೊಟ್ಟಿದ್ದು ನಮ್ಮನ್ನ ಇಯಾಳಿಸಿ, ಪ್ರಶ್ನಿಸುವ ಕ್ರಿಯೆಯಿಂದ ಪ್ರಜಾಪ್ರಭುತ್ವಕ್ಕೆ ದ್ರೋಹ ಜನ ನಮ್ಮನ್ನ ತಿರಸ್ಕರಿಸಿ ಅಭಿವೃದ್ಧಿ ಮಾಡಿ ಎಂದು ನಿಮ್ಮನ್ನ ಕೂರಿಸಿದ್ರು ಸರ್ಕಾರ ಮಾಡುವ ತಪ್ಪನ್ನ ಜನರ ಮುಂದೆ ಇಡಿ ಎಂದು ನಮ್ಮನ್ನ ಕೂರಿಸಿದ್ದಾರೆ ನಾವು ನಮ್ಮ ಡ್ಯೂಟಿ ಮಾಡುತ್ತಿದ್ದೇವೆ, ನಮ್ಮನ್ನ ಡ್ಯೂಟಿ ಮಾಡಲು ಬಿಡಿ ಕಳೆದ 16 ತಿಂಗಳಲ್ಲಿ ನಿಮ್ಮ ಡ್ಯೂಟಿ ಮಾಡಿ ಒಂದು ಡ್ಯಾಂ ಕಟ್ಟಿದ್ದೀರಾ? ಇವರು ಬಂದಮೇಲೆ ಇದ್ದಿದ್ದ ಡ್ಯಾಂ ಗೇಟ್ ಕಿತ್ಕಂಡ್ ಹೋಯ್ತು.
7-8 TMC ನೀರು ಹೊರಗೋಯ್ತು, 1 TMC ನೀರಿಗೆ ಮಹಾರಾಷ್ಟ್ರ ಕ್ಕೆ 6-7 ಕೋಟಿ ಕೊಡುತ್ತೇವೆ. ಪ್ರತೀ ವರ್ಷ ನಮಗೆ ನೀರು ಪಡೆಯಲು ಮಹಾರಾಷ್ಟ್ರ ಕ್ಕೆ ಹಣ ಕೊಡ್ತೇವೆ. ಡ್ಯಾಂ ಕಟ್ಟಲಾಗಿಲ್ಲ, ರಸ್ತೆ ಆಗಿಲ್ಲ, ಆಸ್ಪತ್ರೆಗಳಲ್ಲಿ ಔಷದಿ ಇಲ್ಲ.ಮೋದಿ ನೀಡುತ್ತಿದ್ದ ಜನ ಔಷಧಿ ಕೇಂದ್ರಗಳನ್ನೂ ಮುಂಚಿ ಹಾಕಿದ್ರಿ ಅಭಿವೃದ್ಧಿ ಮಾಡದೆ ಸರ್ಕಾರ ಬಿಳುತ್ತೆ, ಬಿಜೆಪಿ ಕುತಂತ್ರ ಎಂದು ಹೇಳುತ್ತಿರಿ.
ಈ ಸಾರಿಯ ದಸರಾದಲ್ಲಿ ತಾಯಿ ಚಾಮುಂಡೇಶ್ವರಿ ಗೆ ಅವಮಾನ ದಸರಾದಲ್ಲಿ ಚಾಮುಂಡೇಶ್ವರಿ ತಾಯಿ ವೈಭವಿಕರಿಸಬೇಕು ದಸರಾ, ರಾಜರು, ಕೊಡುಗೆ, ಚಾಮುಂಡೇಶ್ವರಿ ಬಗ್ಗೆ ಒಬ್ಬರೂ ಮಾತಾಡಲಿಲ್ಲ ಬರೀ ಸರ್ಕಾರ ಬಿದ್ದೋಗುತ್ತಿದೆ, ರಾಜಿನಾಮೆ ಬಗ್ಗೆ ಮಾತಾಡಿದ್ದಾರೆ ಉದ್ಘಾಟನೆಗೆ ಹೋದ ಸಾಹಿತಿ ಯಾರೋ ಕೇಂದ್ರದ ಬಗ್ಗೆ ಟೀಕೆ ಮಾಡಿದ್ದಾರೆ ಚಾಮುಂಡೇಶ್ವರಿಯನ್ನ ಆರಾಧನೆ ಮಾಡುವ ಬದಲು ರಾಜಕೀಯಕ್ಕೆ ಸೀಮಿತ.
ಕಾಂಗ್ರೇಸ್ ಕುತಂತ್ರದಿಂದ ಸಾರ್ವಜನಿಕ ದಸರಾವನ್ನ ರಾಜಕೀಯ ಪರಂಪರೆ ಉಪಯೋಗ ಮಾಡುವಂತೆ ಮಾಡಿದ್ದಾರೆ ಇದು ಚಾಮುಂಡೇಶ್ವರಿ ತಾಯಿಗೆ ಮಾಡಿದ ಅವಮಾನ ಕಾಂಗ್ರೇಸ್ನವರಿಗೆ ಸರಿಯಾದ ಶಿಕ್ಷೆಯನ್ನ ಕೊಡುತ್ತಾಳೆ.
ಅಶೋಕ್, ವಿಜಯೇಂದ್ರ, ಹೆಚ್ಡಿಕೆ ಭ್ರಷ್ಟಾಚಾರದಲ್ಲಿ ಮೋದಿ ಭಾಗಿ ಎಂಬ ವಿಚಾರ ಅವರಿಗೆ ಜ್ಞಾನ ಇರಬೇಕಲ್ಲ, ಮುಡಾ ಅಧ್ಯಕ್ಷ ಯಾರು, ಯಾವ ಪಾರ್ಟಿ ಸಿದ್ದರಾಮಯ್ಯನವರ ರೈಟ್ ಹ್ಯಾಂಡ್ ಮರಿಗೌಡ ಮುಡಾದಲ್ಲಿ 2-3 ಸಾವಿರ ಕೋಟಿ ಅವ್ಯವಹಾರ ಎಂದು ಪತ್ರ ಬರೆದದ್ದು ಅವರು ರೈಸ್ ಆಗಿದ್ದು ನಿಮ್ಮ ತವರಲ್ಲೇ ಬಿಜೆಪಿಯನ್ನ ಹಿಡ್ಕಳ್ತಿರಲ್ಲ ಆ ಸೈಟಿನ ಬೆಲಯನ್ನ ಯಾರು ಕಟ್ಟಿರಲಿಲ್ಲ, ಅವರೇ 62 ಕೋಟಿ ಅಂತ ಹೇಳಿದ್ದು ಬೆಲೆ ಕಟ್ಟಿದ್ದೂ ಇವರೇ ತನಿಖೆ ಮಾಡಲು ಪತ್ರ ಬರೆದವ್ರು ಕಾಂಗ್ರೇಸ್ ಪಾರ್ಟಿಯವರೆ ನಿಮ್ಮ ಹಿಂಬಾಲಕರೇ ಕೆಡ್ಡಾ ತೋಡಿದ್ರು ನಿಮ್ಮ ಗಮನಕ್ಕೆ ಬಂದಿಲ್ಲ.
ರಾಜಕೀಯವಾಗಿ ವಿರೋಧ ಪಕ್ಷ ಎನ್ನುತ್ತಿರಿ, ನಾವೇನು ಪತ್ರ ಬರೆದಿಲ್ಲ ನನ್ನ ಹಿಂದೆ ಇರುವರೇ ಬೆನ್ನಿಗೆ ಚೂರಿ ಹಾಕುತ್ತಾರೆ ಎಂದು ಸಂಗೊಳ್ಳಿ ರಾಯಣ್ಣ ಪೂಜೆಯಲ್ಲಿ ಅವರೇ ಹೇಳಿದ್ದಾರೆ ಸಂಗೊಳ್ಳಿ ರಾಯಣ್ಣಂಗೆ ಹಾಗೆ ಮಾಡಿದ್ರು, ನನಗೂ ಹಾಗೆ ಮಾಡುತ್ತಾರೆ ಎಂದು ಹೇಳಿದ್ದಾರೆ ಯಾರೇ ಕೆಳಮಟ್ಟದಲ್ಲಿನ ಮಾತಾಡ್ತಾರೆ ಅದಕ್ಕೆ ಉತ್ತರಿಸಲ್ಲ ನನ್ನ ಜವಬ್ದಾರಿಯುತ ಸ್ಥಾನಕ್ಕೆ ಗೌರವ ಕೊಡುವ ಹೇಳಿಕೆ ಕೊಡುವೆ.
ಮುಡಾ ಪ್ರಕರಣದಲ್ಲಿ ಹೆಚ್ಡಿಕೆ ಒತ್ತಡದಲ್ಲಿ ಪಾದಯಾತ್ರೆ ಎಂಬ ಡಿಕೆಶಿ ಹೇಳಿಕೆ ವಿಚಾರ ನಮ್ಮ NDA ಪಾರ್ಟಿಯ ಅಲೆಯನ್ಸ್ JDS ನವರು ಇದ್ದಾರೆ ನಮ್ಮಲ್ಲಿ ಹೊಂದಾಣಿಕೆ ಇದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಏನಾಗಿದೆ ಎಲ್ಲರಿಗೂ ಗೊತ್ತಿದೆ ಕಳೆದ ಭಾರಿ ಕಾಂಗ್ರೇಸ್ JDS ಹೊಂದಾಣಿಕೆ ಮಾಡಿಕೊಂಡಿದ್ರು ಇಡೀ ರಾಜ್ಯದಲ್ಲಿ ಒಂದೇ ಒಂದು ಸೀಟು ಬಂದಿದೆ ನಮ್ಮ ಹೊಂದಾಣಿಕೆಯಲ್ಲಿ 19 ಸೀಟುಗಳನ್ನ ಗೆದ್ದಿದ್ದೇವೆ ಜನ ನಮಗೆ ಆಶೀರ್ವಾದ ಮಾಡಿದ್ದಾರೆ ಅದಕ್ಕೆ ಹೊಟ್ಟೆ ಹುರಿ ಜಿಟಿಡಿ ಶಾಸಕರಾಗಿ ಸಿಎಂ ಬಂದಾಗ ಏನು ಹೊಗಳಬೇಕೋ ಅದನ್ನ ಮಾಡಿದ್ದಾರೆ.
ತೆಲಂಗಾಣ ಸಿಎಂ ಮೋದಿ ಬಂದಾಗ ಅವರನ್ನ ದೊಡ್ಡ ಅಣ್ಣ ಎಂದಿದ್ದಾರೆ ಅವರ ಮೇಲೆ ನೀವು ಆಕ್ಷನ್ ತಗಳ್ತೀರಾ, ಅದು ಸರ್ವೇ ಸಾಮಾನ್ಯ ಜಾತಿಗಣತಿ ಬಿಡುಗಡೆ ಮಾಡಲು ಕಳೆದ ಅಧಿಕಾರದ ಅವದಿಯಲ್ಲೇ ಮಾಡಬಹುದಿತ್ತು ಈಗ ಸುಮ್ನೆ ಅವಾಗವಾಗ ಬಿಡ್ತಿನಿ ಅಂತ ಹೇಳಿಕೊಂಡು ಹೋಗುತ್ತಿದ್ದಾರೆ ಅವರ ಕ್ಯಾಬಿನೆಟ್ ಒಕ್ಕಲಿಗ ಮಂತ್ರಿಗಳು ವಿರೋಧ ಮಾಡಿ ಲೆಟರ್ ಕೊಟ್ಟಿದ್ದಾರೆ ಎಲ್ಲಾ ಲಿಂಗಾಯತ ಶಾಸಕರು ಇದು ಅವೈಜ್ಞಾನಿಕ ಎಂದು ಕೊಟ್ಟಿದ್ದಾರೆನಾವು ಜಾತಿ ಗಣತಿಯ ವಿರೋಧಿಗಳಲ್ಲ.
ಬಿಜೆಪಿ ಜಾತಿ ಗಣತಿ ವಿರೋಧಿಗಳಲ್ಲ, ಕಾಂಗ್ರೇಸ್ ಗೆ ಹೆಂಗೆ ಬೇಕೊ ಅಂಗೆ ಮಾಡಿದ್ದೀರಿ ಯಾವ ಜಾತಿಯನ್ನ ವೈಭವಿಕರಿಸಬೇಕು, ಮಾಡಿದ್ದೀರ, ಬೇರೆ ಜಾತಿಯನ್ನ ತುಳಿದಿದ್ದೀರ ಅವರ ಪಾರ್ಟಿಯಲ್ಲೇ ಗೊಂದಲ ಇರುವಾಗ ಪದೇ ಪದೆ ಯಾಕೆ ಹೇಳ್ತಿರ ಮೊದಲು ನಿಮ್ಮ ಪಾರ್ಟಿಯವರಿಗೆ ಸಭೆ ಮಾಡಿ ಬುದ್ದಿ ಹೇಳಿ.
ದಸರಾದಲ್ಲಿ ಚಾಮುಂಡೇಶ್ವರಿ ತಾಯಿ ವೈಭವಿಕರಿಸಬೇಕು ದಸರಾ, ರಾಜರು, ಕೊಡುಗೆ, ಚಾಮುಂಡೇಶ್ವರಿ ಬಗ್ಗೆ ಒಬ್ಬರೂ ಮಾತಾಡಲಿಲ್ಲ ಬರೀ ಸರ್ಕಾರ ಬಿದ್ದೋಗುತ್ತಿದೆ, ರಾಜಿನಾಮೆ ಬಗ್ಗೆ ಮಾತಾಡಿದ್ದಾರೆ ಉದ್ಘಾಟನೆಗೆ ಹೋದ ಸಾಹಿತಿ ಯಾರೋ ಕೇಂದ್ರದ ಬಗ್ಗೆ ಟೀಕೆ ಮಾಡಿದ್ದಾರೆ ಚಾಮುಂಡೇಶ್ವರಿಯನ್ನ ಆರಾಧನೆ ಮಾಡುವ ಬದಲು ರಾಜಕೀಯಕ್ಕೆ ಸೀಮಿತ.
ಕಾಂಗ್ರೇಸ್ ಕುತಂತ್ರದಿಂದ ಸಾರ್ವಜನಿಕ ದಸರಾವನ್ನ ರಾಜಕೀಯ ಪರಂಪರೆ ಉಪಯೋಗ ಮಾಡುವಂತೆ ಮಾಡಿದ್ದಾರೆ ಇದು ಚಾಮುಂಡೇಶ್ವರಿ ತಾಯಿಗೆ ಮಾಡಿದ ಅವಮಾನ ಕಾಂಗ್ರೇಸ್ನವರಿಗೆ ಸರಿಯಾದ ಶಿಕ್ಷೆಯನ್ನ ಕೊಡುತ್ತಾಳೆ. ಅಶೋಕ್, ವಿಜಯೇಂದ್ರ, ಹೆಚ್ಡಿಕೆ ಭ್ರಷ್ಟಾಚಾರದಲ್ಲಿ ಮೋದಿ ಭಾಗಿ ಎಂಬ ವಿಚಾರ ಅವರಿಗೆ ಜ್ಞಾನ ಇರಬೇಕಲ್ಲ, ಮುಡಾ ಅಧ್ಯಕ್ಷ ಯಾರು, ಯಾವ ಪಾರ್ಟಿ.