ಬೆಂಗಳೂರು;- ಇಂದು ಬೆಳಿಗ್ಗೆ ಸಿಎಂ ಸಿದ್ದರಾಮಯ್ಯ ಅವರು, ತೀವ್ರ ಮಂಡಿ ನೋವು ಇರುವ ಹಿನ್ನೆಲೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಇದೀಗ ಚಿಕಿತ್ಸೆ ಪಡೆದು ಸರ್ಕಾರಿ ಕಾವೇರಿ ನಿವಾಸಕ್ಕೆ ತೆರಳಿದ್ದಾರೆ. ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಸಿಎಂ ತೆರಳಿದರು. ಈ ವೇಳೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಹಾಗೆ ತೆರಳಿದರು.
ಕಾಲಿಗೆ ನೀ ಪ್ಯಾಡ್ ಹಾಕಿದ್ದು, ಕಾರ್ ಹತ್ತಲು ಸಿಎಂ ಆಪ್ತರಕ್ಷಕರ ಸಹಾಯ ಪಡೆದರು. ಎರಡು ದಿನ ರೆಸ್ಟ್ ಮಾಡಲು ಸಿಎಂಗೆ ಸಲಹೆ ನೀಡಿದ್ದಾರೆ
ಮಣಿಪಾಲ್ ಆಸ್ಪತ್ರೆಯ ಡಾ. ಸತ್ಯನಾರಾಯಣ ಅವರಿಂದ ಚಿಕಿತ್ಸೆ ಪಡೆದಿದ್ದಾರೆ.