ಕೊಡಗು: ನಿಗದಿತ ಸಮಯಕ್ಕಿಂತ ಸ್ವಲ್ಪ ತಡವಾಗಿ ರಾಜ್ಯದ ಮುಖ್ಯಮಂತ್ರಿಗಳು ವಿರಾಜಪೇಟೆಗೆ ಆಗಮಿಸಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಕೊಡಗು ಉಸ್ತುವಾರಿ ಸಚಿವ ಬೋಸರಾಜು, ಆಗಮಿಸಿದ್ದಾರೆ.
ಬಿಟ್ಟಂಗಾಲದ ಗರ್ಲ್ಸ್ ಗ್ರೌಂಡಿಗೆ ಹೆಲಿಕ್ಯಾಪ್ಟರ್ ಮೂಲಕ ಬಂದು ಇಳಿದ ಮುಖ್ಯಮಂತ್ರಿಗಳನ್ನು ಜಿಲ್ಲೆಯ ಇಬ್ಬರು ಶಾಸಕರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪುಷ್ಪಗಚ್ಛವನ್ನು ನೀಡಿ ಅವರನ್ನು ಬರಮಾಡಿಕೊಂಡರು.
BREAKING.. Jagadish Shettar: ಅಮಿತ್ ಶಾ ಮಾತುಕತೆ ಯಶಸ್ವಿ: ಕಾಂಗ್ರೆಸ್ʼಗೆ ಗುಡ್ ಬೈ ಹೇಳಿದ ಮಾಜಿ ಸಿಎಂ
ನಂತರ ನೇರವಾಗಿ ವಿರಾಜಪೇಟೆಯಲ್ಲಿರುವ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣನವರ ನಿವಾಸಕ್ಕೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಹಾಗೂ ಸಚಿವರುಗಳನ್ನು ಶಾಸಕ ಪೊನ್ನಣ್ಣ ಕೊಡಗಿನ ಸಾಂಪ್ರದಾಯಿಕ ಪೇಟೆ ತೊಡಿಸಿ ಬರಮಾಡಿಕೊಂಡರು.