ಬೆಂಗಳೂರು:- ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖಾ ತಂಡಕ್ಕೆ ಸಿಎಂ ಮೆಚ್ಚುಗೆ ಸೂಚಿಸಿದ್ದಾರೆ.
ಕೆಳ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಪ್ರಕರಣದ ಆರಂಭದಲ್ಲಿ ಬುದ್ಧಿವಂತಿಕೆಯಿಂದ ಕೆಲಸ ಮಾಡಿದ್ದಾರೆ. ಆದ್ದರಿಂದಲೇ ಶಂಕಿತರನ್ನು ಪತ್ತೆ ಹಚ್ಚಲು ಸಹಕಾರಿಯಾಯಿತು. ಶಂಕಿತ ಧರಿಸಿದ್ದ ಟೋಪಿ ಆಧರಿಸಿ ಆತನ ಮೂಲ ಪತ್ತೆ ಹಚ್ಚಿದ್ದಕ್ಕೆ ಶ್ಲಾಘಿಸಿದರು.
ಇ-ಬೀಟ್ ವ್ಯವಸ್ಥೆ ಸರಿಪಡಿಸಿವಂತೆ ಸಭೆಯಲ್ಲಿ ಸಿಎಂ ಹಾಗೂ ಗೃಹ ಸಚಿವರು ಸೂಚನೆ ನೀಡಿದರು. ‘ರಾಜ್ಯದಲ್ಲಿ ಅನೇಕ ಠಾಣೆಗಳಿಗೆ ಭೇಟಿ ನೀಡಿ, ಪರಿಶೀಲಿಸಿಲಾಗಿದೆ. ಆದರೆ, ಶೇ. 70ರಷ್ಟು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಇ-ಬೀಟ್ ವ್ಯವಸ್ಥೆ ಬಗ್ಗೆ ಗೊತ್ತಿಲ್ಲ. ಬೀಟ್ನ ಸಿಬ್ಬಂದಿಯ ಲೋಕೇಷನ್ ಮಾತ್ರ ಸಿಗುತ್ತದೆ. ಆತ ಕರ್ತವ್ಯದ ವೇಳೆ ಕೈಗೊಂಡ ಚಟುವಟಿಕೆಗಳ ಮಾಹಿತಿ ಅಧಿಕಾರಿಗಳ ಇರುವುದಿಲ್ಲ. ಇದನ್ನು ಯಾವ ರೀತಿ ಯಶಸ್ವಿ ಗೊಳಿಸುತ್ತೀರೋ ಗೊತ್ತಿಲ್ಲ. ಇ-ಬೀಟ್ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳದೇ ಹೋದರೆ, ಇಲಾಖೆಯ ಗುಣ್ಣಮಟ್ಟವನ್ನು ಮತ್ತಷ್ಟು ಹೆಚ್ಚಿಸಲು ಸಾಧ್ಯವಾಗುವುದಿಲ್ಲ. ಬೀಟ್ ಕರ್ತವ್ಯದ ಬಗ್ಗೆ ಡೈರಿಯಲ್ಲಿ ಬರೆದಿಡುವ ಹಳೇ ವ್ಯವಸ್ಥೆಗೆ ಹಿಂದಿರುಗಬೇಕೇ ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಪ್ರಶ್ನಿಸಿದರು.ದ
ಇನ್ನು ಸುಳ್ಳು ಸುದ್ದಿ ಹಬ್ಬಿಸುವವರಿಗೆ ಬಿಸಿ ಮುಟ್ಟಿಸಿ ಎಂದು ಅಧಿಕಾರಿಗಳಿಗೆ ಸಭೆ ಖಡಕ್ ಸೂಚನೆ ನೀಡಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುವುದು ಹಚ್ಚಾಗುತ್ತಿದೆ. ಸರ್ಕಾರ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ವಿರುದ್ಧ ಅವಾಚ್ಯವಾಗಿ, ತಿರುಚಿದ ಹೇಳಿಕೆಗಳನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಸಾಮಾನ್ಯ ಜನರ ವಿರುದ್ಧವು ಆಗುತ್ತಿದೆ. ಅಂತವರನ್ನು ಕೂಡಲೇ ಪತ್ತೆಹಚ್ಚಿ, ಬಿಸಿ ಮುಟ್ಟಿಸುವ ಕೆಲಸವಾಗಬೇಕು. ಜೊತೆಗೆ ಇಂತಹ ತಪ್ಪುಗಳನ್ನು ಮತ್ತೊಬ್ಬರು ಮಾಡಲು ಮುಂದಾಗಬಾರದು. ತ್ವರಿತಗತಿಯಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸುವ ಕೆಲಸ ಆಗಬೇಕು ಎಂದರು