ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ನವರು ಅಡ್ಡ ಮತದಾನ ಮಾಡುತ್ತಾರೆ. ಅವರ ವೋಟು ನಮಗೆ ಬೀಳುತ್ತದೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು. ನಮ್ಮ ಪಕ್ಷದ 3 ಅಭ್ಯರ್ಥಿಗಳು ಸಹ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
Rajyasabha Election: ಕಾಂಗ್ರೆಸ್ ಪರ ಎಸ್.ಟಿ.ಸೋಮಶೇಖರ್ ಮತ: ಬಿಜೆಪಿಯಿಂದಲೇ ಉಚ್ಛಾಟಿಸುವ ಸಾಧ್ಯತೆ
ರಾಜ್ಯಸಭಾ ಚುನಾವಣಾ (Rajya Sabha Election) ಮತದಾನದ ಕುರಿತು ಮಾತನಾಡಿದ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ತಾಕತ್ತು. ಆಪರೇಷನ್ ಅವರಲ್ಲ (ಬಿಜೆಪಿ), ನಾವು ಸರ್ಜರಿ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಕರ್ನಾಟಕದ 4 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ನಿಂದ ಅಜಯ್ ಮಾಕೆನ್, ಎನ್.ಹುಸೇನ್, ಚಂದ್ರಶೇಖರ್ ಮತ್ತು ಬಿಜೆಪಿಯಿಂದ ನಾರಾಯಣ್ ಸಾ.ಭಾಂಡಗೆ ಹಾಗೂ ಜೆಡಿಎಸ್ನಿಂದ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ.