ರಾಮನಗರ: ಬಿಜೆಪಿ ಹಾಗೂ ಜೆಡಿಎಸ್ ಜಂಟಿ ಪಾದಯಾತ್ರೆಯಿಂದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ನಿದ್ದೆ ಬರ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ಪಾದಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್ ನಾಯಕರಿಗೆ ರಾತ್ರಿ ನಿದ್ದೆ ಬರ್ತಿಲ್ಲ. ಸಿದ್ದರಾಮಯ್ಯಗೆ ಹಾಗೂ ಡಿಕೆಶಿಗೆ ನಿದ್ದೆ ಬರ್ತಿಲ್ಲ. ಯಾವಾಗ ಸಿದ್ದರಾಮಯ್ಯ ಕುರ್ಚಿ ಖಾಲಿಯಾಗುತ್ತೆ ಎಂದು ಕಾಂಗ್ರೆಸ್ ನಾಯಕರು ಕಾಯ್ತಿದ್ದಾರೆ ಎಂದರು.
Sexual Wellness: ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗಲು ಇದೇ ಕಾರಣ ನೋಡಿ..!
ಬಿಜೆಪಿ ಜೆಡಿಎಸ್ ಹೋರಾಟದ ಕಿಚ್ಚು ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಇಳಿಸುವವರೆಗೆ ಆರಲ್ಲ. ನಮ್ಮದು ಅಧಿಕಾರಕ್ಕಾಗಿ ನಡೆಯುವ ಪಾದಯಾತ್ರೆ ಅಲ್ಲ, ಬದಲಾಗಿ ತುಳಿತಕ್ಕೊಳಗಾದ ಸಮುದಾಯಕ್ಕೆ ನ್ಯಾಯ ಕೊಡಿಸಲು ಹೋರಾಟವಾಗಿದೆ. ನಾಡಿನ ಜನರ ಧ್ವನಿಯಾಗಿ ಪ್ರಶ್ನೆ ಮಾಡ್ತಿದ್ದೇವೆ. ಆದರೆ ಇದಕ್ಕೆ ಉತ್ತರ ಕೊಡದ ಸಿದ್ದರಾಮಯ್ಯ ಅವರು ಇವಾಗ ನಮಗೆ ಪ್ರಶ್ನೆ ಮಾಡ್ತಿದ್ದಾರೆ ಎಂದು ಟೀಕಿಸಿದರು.