ಬೆಂಗಳೂರು: ಮಾಜಿ ಸಚಿವ ವರ್ತೂರು ಸಂತೋಷ್ ಹೆಸರಲ್ಲಿ ಶ್ವೇತಾಗೌಡಳಿಂದ ನವರತ್ನ ಜ್ಯುವೆಲ್ಲರಿ ಮಾಲೀಕರಿಗೆ ವಂಚನೆ ಸಂಬಂಧ ಕೊನೆಗೂ ಶ್ವೇತಾ ವಂಚಿಸಿ ಬಚ್ಚಿಟ್ಟಿದ್ದ 2 ಕೆಜಿ 100 ಗ್ರಾಂ ಕೆ.ಜಿ ಚಿನ್ನಾಭರಣ ಸುಳಿವು ಸಿಕ್ಕಿದೆ. ಐಶ್ವರ್ಯ ಗೌಡಳ ವಂಚನೆ ಪ್ರಕರಣ ಸದ್ದು ಮಾಡೋಕು ಮೊದಲೇ ಶ್ವೇತಾಗೌಡಳ ವಂಚನೆ ಪ್ರಕರಣ ಸದ್ದು ಮಾಡಿತ್ತು.
ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರಲ್ಲಿ ಕೆಜಿಗಟ್ಟಲೆ ಚಿನ್ನಾಭರಣ ವಂಚಿಸಿ ಅರೆಸ್ಟ್ ಕೂಡ ಮಾಡಲಾಗಿತ್ತು. ಆರೋಪಿತೆ ಶ್ವೇತಾಗೌಡ ಅರೆಸ್ಟ್ ಆದ್ರೂ ಚಿನ್ನದ ಮೂಲ ಗೊತ್ತಾಗಿರಲಿಲ್ಲ. ಬಾಗಲಗುಂಟೆಯಿಂದ ರಾಜಸ್ಥಾನಕ್ಕೆ ಹೋಗಿ ಹುಡುಕಾಡಿದ್ರೂ ಬಚ್ಚಿಟ್ಟಿದ್ದ ಚಿನ್ನಾಭರಣದ ಸುಳಿವು ಸಿಕ್ಕಿರಲಿಲ್ಲ. ಆ ಬಳಿಕ ಜೋಧಪುರದಲ್ಲಿ ಮೋಹನ್ ಲಾಲ್ ಬಂಧಿಸಿದ ಕರೆತಂದಾಗಚಿನ್ನಾ ಯಾರ ಬಳಿಯಿದೆ ಎಂಬ ಮಾಹಿತಿ ಬಯಲಾಗಿದೆ.
Silver Anklets: ಬೆಳ್ಳಿ ಕಾಲ್ಗೆಜ್ಜೆ ಧರಿಸುವುದರಿಂದ ಲಭಿಸುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ..?
ನವರತ್ನ ಜ್ಯುವೆಲ್ಲರಿ ಮಾಲೀಕರಿಗೆ 2 ಕೆಜಿ 945 ಗ್ರಾಂ ಚಿನ್ನಾಭರಣ ವಂಚಿಸಿದ್ದ ಶ್ವೇತಗೌಡಳನ್ನ ಹಾಗೂ ವರ್ತೂರು ಪ್ರಕಾಶ್ ರನ್ನ ತನಿಖಾಧಿಕಾರಿ ಎಸಿಪಿ ಗೀತಾ ವಿಚಾರಣೆ ನಡೆಸಿದ್ರು. ಅಲ್ಲದೇ ಪ್ರಕರಣದಲ್ಲಿ ಶ್ವೇತಗೌಡ ಸೇರಿ ಚೆನ್ನರಾಮ್ ಹಾಗೂ ಮೋಹನ್ ಲಾಲ್ ರನ್ನ ಬಂಧಿಸಿದ್ದರು. ನವರತ್ನ ಜ್ಯುವೆಲರಿ ಮಾಲೀಕ ಸಂಜಯ್ ಭಾಪ್ನಾ ಬಳಿ ಪಡೆದಿದ್ದ 2KG 945 ಗ್ರಾಂ ಚಿನ್ನದಲ್ಲಿ 800 ಗ್ರಾಂ ರಿಕವರಿ ಆಗಿತ್ತು. ಉಳಿದ 2 ಕೆಜಿ 145 ಗ್ರಾಂ ಚಿನ್ನದ ಸುಳಿವೇ ಸಿಕ್ಕಿರಲಿಲ್ಲ. ಶ್ವೇತಾ ವಿಚಾರಣೆ ವೇಳೆ ರಾಮ್ ದೇವ್ ಜ್ಯುವೆಲ್ಲರಿ ಮಾಲೀಕ ಚೆನ್ನಾರಾಮ್ ಗೆ ನೀಡಿದ್ದಾಗಿ ಮಾಹಿತಿ ನೀಡಿದ್ಲು.
ರಾಮ್ ದೇವ್ ಜ್ಯುವೆಲ್ಲರಿ ಮಾಲೀಕ ಚೆನ್ನಾರಾಮ್ ಬಂಧಿಸಿ ವಿಚಾರಣೆ ನಡೆಸಿದಾಗ ಚೆನ್ನಾರಾಮ್ ನ ಸಂಬಂಧಿ ಮೋಹನ್ ಲಾಲ್ ಚಿನ್ನಾಭರಣ ಪಡೆದಿರೋದಾಗಿ ಮಾಹಿತಿ ನೀಡಿದ್ದ. ಮೋಹನ್ ಲಾಲ್ ನ ಜೋಧಪುರದಿಂದ ಬಂಧಿಸಿ ಕರೆತಂದಾಗ ಬಾಗಲಗುಂಟೆಯ ತೋಟದಗುಡ್ಡದಹಳ್ಳಿಯ ಬೇರಾ ರಾಮ್ ಬಳಿಯಿದೆ ಅಂತ ಮಾಹಿತಿ ನೀಡಿದ್ದಾನೆ.
ಬೇರಾ ರಾಮ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ನಂಬರ್ ಸ್ವಿಚ್ ಆಫ್ ಮಾಡ್ಕೊಂಡು ಬೆಂಗಳೂರು ಬಿಟ್ಟು ಬೇರೆ ರಾಜ್ಯಕ್ಕೆ ಎಸ್ಕೇಪ್ ಆಗಿದ್ದಾನೆ. ನಾಪತ್ತೆಯಾಗಿರುವ ಬೇರಾ ರಾಮ್ ಗಾಗಿ ಪೊಲೀಸರಿಂದ ಹುಡುಕಾಟ ನಡೀತಿದೆ.