ಗದಗ :- ತಾಲೂಕಿನ ಹೊಂಬಳ ಗ್ರಾಮದಲ್ಲಿ ಶ್ರೀ ಈಶ್ವರ ದೇವರ ಜಾತ್ರೆಯು ಅಧ್ಧೂರಿಯಾಗಿ ಜರುಗಿತು. ಜಾತ್ರೆಯ ಹಿನ್ನೆಲೆ ಡೊಳ್ಳು ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಸೇವೆಯನ್ನು ಮಾಡಲಾಯಿತು.
ಮಹಿಳೆಯರಿಂದ ಕಳಸ ಹಾಗೂ ಕುಂಭ ಮೆರವಣಿಗೆ ಮಾಡಲಾಯಿತು. ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವವು ಜರುಗಿತು. ಭಕ್ತಾದಿಗಳು ರಥಕ್ಕೆ ಉತ್ತತ್ತಿ ಎಸೆಯೋ ಮೂಲಕ ತಮ್ಮ ಇಷ್ಟಾರ್ಥ ಸಿಧ್ಧಿಗಾಗಿ ಬೇಡಿಕೊಂಡ್ರು. ವಿವಿಧ ವಾದ್ಯಮೇಳಗಳು, ನಂದಿಕೋಲು ರಥೋತ್ಸವಕ್ಕೆ ಮೆರಗನ್ನು ನೀಡಿದ್ವು. ಹೊಂಬಳ, ಲಿಂಗಧಾಳ, ಬೆಳಹೋಡ, ಗದಗ, ಎಚ್ ಎಸ್ ವೆಂಕಟಾಪೂರ, ಬಳಗಾನೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ರು.
![Demo](https://ainlivenews.com/wp-content/uploads/2023/12/spoorthi-1.jpg)
![](https://ainlivenews.com/wp-content/uploads/2024/01/Ad-Banner-copy-scaled.jpg)