ಶಿಡ್ಲಘಟ್ಟ: ಪಲ್ಲಿಚೆರ್ಲು ಗ್ರಾ ಪಂ ಮೂರನೆಯ ಅವಧಿಗೆ ಅಧ್ಯಕ್ಷರಾಗಿ ಮೀನಾ ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾದರು.
ಬೆಜೆಪಿ ಬೆಂಬಲಿತ ಸದಸ್ಯರಾದ ಪಲ್ಲಿಚೆರ್ಲು ಗ್ರಾಮದ ಮೀನಾ ವೆಂಕಟೇಶ್, ಹಾಗು ಉಪಾಧ್ಯಕ್ಷರಾಗಿ ಗಂಗರತ್ನ ಡಿ ಆರ್ ದೇವರಾಜು ಮೂರನೆ ಅವದಿಗೆ ಆಯ್ಕೆ ಆಗುವ ಮೂಲಕ ಬಿಜೆಪಿ ಮೇಲುಗೈ ಸಾಧಿಸಿದೆ.
ಈ ಸಂದರ್ಭದಲ್ಲಿ ನೂತನ ಅಧ್ಯೆಕ್ಷೆ ಹಾಗೂ ಉಪಾಧ್ಯಕ್ಷರಿಗೆ ಶುಭ ಹಾರೈಸಿ ಮಾತನಾಡಿದ ರಾಮಚಂದ್ರ ಗೌಡ, ಅವಿರೋಧ ಆಯ್ಕೆ ಸಂತಸ ತಂದಿದೆ, ಆಯ್ಕೆ ಆಗಿರುವ ನೂತನ ಅಧ್ಯೆಕ್ಷೆ ಹಾಗೂ ಉಪಾಧ್ಯಕ್ಷರು ಪಕ್ಷ ಭೇದ ಮಾಡದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯ್ತಿಯನ್ನು ಅಭಿವೃದ್ಧಿ ಪಥದಲ್ಲಿ ಮುನ್ನೆಡಸಬೇಕು ಎಂದು ಹೇಳಿದರು.
ನಂತರ ಮಾತನಾಡಿದ ಮಾಜಿ ಶಾಸಕ ಎಂ ರಾಜಣ್ಣ, ರಾಜಕಾರಣ ಚುನಾವಣಾ ಸಮಯದಲ್ಲಿ ಮಾತ್ರ ಮಾಡಬೇಕು ಅಭಿವೃದ್ಧಿ ವಿಚಾರಲ್ಲಲ್ಲ, ಗ್ರಾ ಪಂ ಎಲ್ಲ ಮುಖಂಡರು, ಸದಸ್ಯರು ಒಟ್ಟಾಗಿದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಆ ನಿಟ್ಟಿನಲ್ಲಿ ಇಲ್ಲಿಯ ಸದಸ್ಯರೆಲ್ಲರೂ ತಮ್ಮ ವೈಯಕ್ತಿಕ ಪ್ರತಿಷ್ಟೆಗಳನ್ನು ಬಿಟ್ಟು ಅಭಿವೃದ್ಧಿಗಾಗಿ ದುಡಿಯಬೇಕು ಆ ಮೂಲಕ ಮಾದರಿ ಪಂಚಾಯ್ತಿಯಾಗಿ ರೂಪು ಗೊಳಿಸಬೇಕು ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಪಿಡಿಒ ರಮೇಶ್, ಕಾರ್ಯದರ್ಶಿ ಗೋಪಾಲಕೃಷ್ಣ, ಬಿಜೆಪಿ ಮುಖಂಡ ಆನಂದಗೌಡ, ನಗರಸಭೆ ಸದಸ್ಯ ನಾರಾಯಣಸ್ವಾಮಿ, ಗ್ರಾ ಪಂ ಸದಸ್ಯರಾದ ದೇವರಾಜ್, ಲಕ್ಷ್ಮೀನಾರಾಯಣ, ಮುಖಂಡರಾದ ಸೋಮಶೇಖರ್, ಹಾಗು ಇನ್ನಿತರರು ಉಪಸ್ಥಿತರಿದ್ದರು.