ಬೆಂಗಳೂರು: ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ರಾಜಕೀಯ ವಲಯದಲ್ಲಿ ಭಾರೀ ಬೆಳವಣಿಗೆಯೊಂದು ನಡೆದಿದೆ. ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಎಂಎಲ್ಸಿ ಜಗದೀಶ್ ಶೆಟ್ಟರ್ (Jagadish Shettar) ಅವರು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಸಚಿವ ಚೆಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
BREAKING.. Jagadish Shettar: ಅಮಿತ್ ಶಾ ಮಾತುಕತೆ ಯಶಸ್ವಿ: ಕಾಂಗ್ರೆಸ್ʼಗೆ ಗುಡ್ ಬೈ ಹೇಳಿದ ಮಾಜಿ ಸಿಎಂ
ನಗರದಲ್ಲಿ ಮಾತನಾಡಿದ ಅವರು, ಶೆಟ್ಟರ್ ಬಿಜೆಪಿ ಸೇರ್ಪಡೆ ಬಗ್ಗೆ ಗೊತ್ತಿಲ್ಲ ಆಗೊಂದು ವೇಳೆ ಹೋದರೆ ಅದು ವಿಪರ್ಯಾಸ , ಶೆಟ್ಟರ್ ಅಂತ ನಾಯಕರಿಗೆ ಸರಿ ಹೋಗಲ್ಲ ಎಂದು ಹೇಳಿದ್ದಾರೆ.
ಶೆಟ್ಟರ್ ಹೋದ್ರೂ ಅದರಿಂದ ನಮಗೆ ನಷ್ಟವೇನಿಲ್ಲ ಆದರೆ ಲಕ್ಷ್ಮಣ್ ಸವದಿಯವರು ಹೋಗಲ್ಲ ನಾನು ಅವರ ಬಳಿಯೂ ಮಾತನಾಡಿದ್ದೇನೆ ಅವರು ಹೋಗಲ್ಲ ಎಂದಿದ್ದಾರೆ