ಬೆಂಗಳೂರು: ಶೀಲ ಶಂಕಿಸಿ ಪತ್ನಿ,ಪ್ರಿ ಯಕರನ ಬರ್ಬರ ಹತ್ಯೆಮಾಡಿ ಆ ನಂತರ ಪತಿ ಕೂಡ ಸೂಸೈಡ್ ಮಾಡಿಕೊಂಡಿರುವ ಘಟನೆ ಆರ್ ಬಿ ಐ ಲೇಔಟ್ ಸಮೀಪದ ಸೋಮೇಶ್ವರ ಬಡಾವಣೆಯಲ್ಲಿ ನಡೆದಿದೆ.
ಮರದ ತುಂಡಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಇಬ್ಬರ ಕೊಲೆಗೈದು ಆ ನಂತರ ತಾನೂ ಕೂಡ ಸೂಸೈಡ್ ಮಾಡಿಕೊಂಡಿದ್ದಾನೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಹತ್ಯೆ ನಡೆಸಿರುವ ಪತಿ ಕೊಣನಕುಂಟೆ ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉತ್ತರ ಕರ್ನಾಟಕ ಮೂಲದ ಪೈತಮ್ಮ( 40 ) ಗೊಲ್ಲ ಬಾಬು (45) ದಂಪತಿಗಳು ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದರು ಈ ವೇಳೆ ಪತ್ನಿಗೆ ಗಣೇಶ್ ಕುಮಾರ್ ಜೊತೆ ಅಕ್ರಮ ಸಂಬಂಧ ಇರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ದಂಪತಿಗಳ ನಡುವೆ ಸಾಕಷ್ಟು ಬಾರಿ ಜಗಳ ಕೂಡ ನಡೆದಿತ್ತು.
ಆದರೆ ನಿನ್ನೆ ಇಬ್ಬರು ಜೊತೆಯಲ್ಲಿದ್ದಾಗ ನೋಡಿದ ಪತಿ ಗೊಲ್ಲ ಬಾಬು ಅಲ್ಲೆ ಇದ್ದ ಮರದ ರೀಪೀಸ್ ನಿಂದ ಹೊಡೆದು ಇಬ್ಬರನ್ನು ಕೊಲೆಗೈದು ಆ ನಂತರ ತಾನೂ ಕೂಡ ಆತ್ಮಹತ್ಯೆ ಮಾಡಿಜಕೊಂಡಿದ್ದಾನೆ.