ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಜೆಡಿಎಸ್ನ ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರ ಸಿಐಡಿ ಕಸ್ಟಡಿ ಅವಧಿ ಇಂದು ಅಂತ್ಯವಾಗಲಿದ್ದು, ಸಿಐಡಿ ಅಧಿಕಾರಿಗಳು ಎರಡು ಬಾರಿ ಕಸ್ಟಡಿಗೆ ಪಡೆದಿದ್ದರು. ಹೇರ್ ಸ್ಯಾಂಪಲ್ ಪರೀಕ್ಷೆ ಸೇರಿದಂತೆ ಕೆಲ ವಿಚಾರಣೆ ಬಾಕಿ ಹಿನ್ನೆಲೆ ಎರಡು ದಿನ ಕಸ್ಟಡಿಗೆ ಪಡೆಯಲಾಗಿತ್ತು.
Health Tips: ಸೌತೆಕಾಯಿ ತಿಂದ ನಂತರ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ..!
ಡಾ. ಸೂರಜ್ ರೇವಣ್ಣ ಇಂದು ಬಹುತೇಕ ಸೆಂಟ್ರಲ್ ಜೈಲು ಪರಪ್ಪನ ಅಗ್ರಹಾರ ಸೇರಲಿದ್ದು, ಈ ಮೂಲಕ ಸೋದರ ಪ್ರಜ್ವಲ್ ಇರುವ ಕ್ವಾರಂಟೈನ್ ಸೆಲ್ ಗೆ ಸೂರಜ್ ಎಂಟ್ರಿ ಕೊಡಲಿದ್ದಾರೆ. ಸೂರಜ್ ರೇವಣ್ಣ ವಿಚಾರಣಾಧೀನ ಖೈದಿಯಾಗಿ ಪರಪ್ಪನ ಅಗ್ರಹಾರ ಸೇರಲಿದ್ದಾರೆ.