ಬೆಂಗಳೂರು: ನಗರದಲ್ಲಿ ಸರಣಿ ಅಪಘಾತ ಮಾಡಿ ಅಪ್ರಾಪ್ತನ ಸಾವಿಗೆ ಕಾರಣವಾಗಿದ್ದ ಚಾಲಕನಿಗೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್-51 ನ್ಯಾಯಾಧೀಶರಿಂದ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.ಚಾಲಕ ಸುರೇಶ್(24)ಗೆ 3 ವರ್ಷಗಳ ಕಠಿಣ ಶಿಕ್ಷೆ & 2 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್
2017ರ ಮೇ.27ರಂದು ಬಾಬುಸಾಪಾಳ್ಯದಲ್ಲಿ ನಡೆದಿದ್ದ ಅಪಘಾತವಾಗಿದ್ದು ಝೆನ್ ಕಾರಿನಲ್ಲಿದ್ದ ಸುರೇಶ್ನಿಂದ ಅತಿವೇಗ & ಅಜಾಗರುಕತೆಯಿಂದ ಸರಣಿ ಅಪಘಾತವಾಗಿತ್ತು. ಮೊದಲು ಬೈಕ್ ಗೆ ಡಿಕ್ಕಿ ಹೊಡೆದು, ಮತ್ತೊಂದು ಕಾರ್, ಮತ್ತೆರಡು ಬೈಕ್ ಗೆ ಡಿಕ್ಕಿ ಹೊಡೆದಿದ್ದ ಬಳಿಕ ರಸ್ತೆ ಪಕ್ಕದಲ್ಲಿದ್ದ ಇಬ್ಬರು ಬಾಲಕರಿಗೆ ಡಿಕ್ಕಿ ಹೊಡೆದಿದ್ದ ಇದರಿಂದ 12 ವರ್ಷದ ಎಂಬ ಬಾಲಕ ಮೃತಪಟ್ಟು, ಮತ್ತೊಬ್ಬ ಬಾಲಕನಿಗೆ ಗಂಭೀರ ಗಾಯವಾಗಿತ್ತು ಈ ಬಗ್ಗೆ ಬಾಣಸವಾಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ..
![Demo](https://ainlivenews.com/wp-content/uploads/2023/12/spoorthi-1.jpg)
ತನಿಖೆ ವೇಳೆ ಚಾಲಕ ಸುರೇಶ್ ನಕಲಿ ನಂಬರ್ ಪ್ಲೇಟ್ ಬಳಸಿದ್ದು ಪತ್ತೆ ಅಷ್ಟಲ್ಲದೇ ಸುರೇಶ್ ಬಳಿ ಡಿಎಲ್, ಕಾರ್ ಇನ್ಸುರೆನ್ಸ್ ಕೂಡ ಇಲ್ಲದಿರುವುದು ಪತ್ತೆಯಾಗಿದ್ದು ತನಿಖೆ ನಡೆಸಿದ್ದ ಪೊಲೀಸರಿಂದ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದರು ಆ ನಂತರ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ CCH-51 ನ್ಯಾಯಾಧೀಶರು…
![](https://ainlivenews.com/wp-content/uploads/2024/01/Ad-Banner-copy-scaled.jpg)