ಕಲಬುರಗಿ: ಕೆ ಎಸ್ ಈಶ್ವರಪ್ಪ ಬಂಡಾಯ ಎದ್ದು ಪಕ್ಷೆತರ ಸ್ಪರ್ಧೆ ವಿಚಾರ ಹಿರಿಯರ ಗಮನಕ್ಕಿದ್ದು ಎಲ್ಲವೂ ಬಗೆಹರಿಯಲಿದೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ .ಕಲಬುರಗಿಯಲ್ಲಿಂದು ಮಾತನಾಡಿದ ವಿಜಯೇಂದ್ರ ಮಾನ್ಯ ಈಶ್ವರಪ್ಪನವರಿಗೆ ಭಗವಂತ ಒಳ್ಳೆಯದನ್ನ ಮಾಡಲಿ ಅಂತಾ ನಾನು ಹಾರೈಸ್ತೆನೆ ವಾಸ್ತವಿಕ ಪರಿಸ್ಥಿತಿ ಅರ್ಥ ಮಾಡಿಕೊಂಡು ನಿರ್ಧಾರ ವಾಪಸ್ ಪಡೆಯುತ್ತಾರೆ.
ಅನ್ನೋ ನಂಬಿಕೆ ಇದೆ ಅಂದ್ರು. ಈಗಲೂ ನಮ್ಮ ನಾಯಕರು ಈಶ್ವರಪ್ಪ ಜೊತೆ ಮಾತುಕತೆ ನಡೆಸಿದ್ದಾರೆ ಎಲ್ಲರೂ ಸೇರಿ ಮನವೋಲಿಸುವ ಪ್ರಯತ್ನ ಮಾಡ್ತಾರೆ. ಕಲಬುರಗಿ ಬೀದರ್ ಇರಲಿ ಯಾವುದೇ ಲೋಕಸಭಾ ಇರಬಹುದು ಎಲ್ಲ ಅಭ್ಯರ್ಥಿ ಗಳನ್ನ ತೀರ್ಮಾನ ಮಾಡಿರೋದು ಹೈಕಮಾಂಡ್ ಅಂತ ಹೇಳಿದ್ರು.