ದಾವಣಗೆರೆ:- ರಸ್ತೆಯಲ್ಲಿ ಕಡ್ಲೆ ಗಿಡ ಮತ್ತು ಚಹಾ ಮಾರಾಟ ಮಾಡುವ ಮೂಲಕ ಅತಿಥಿ ಉಪನ್ಯಾಸಕರು ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ.
ಸರಿಯಾಗಿ ವೇತನ ನೀಡದ್ದರಿಂದ ರೋಸಿ ಹೋಗಿರುವ ಅಥಿತಿ ಉಪನ್ಯಾಸಕರು, ಇಂದು ದಾವಣಗೆರೆಯಲ್ಲಿ ಕಡ್ಲೆ ಗಿಡ ಮತ್ತು ಚಹಾ ಮಾರುವ ಮೂಲಕ ವಿಭಿನ್ನ ಪ್ರತಿಭಟನೆ ಮಾಡಿದ್ದಾರೆ. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದಾರೆ.
ಡಿಸಿ ಕಚೇರಿ ಬಳಿಯ ಹಳೆ ಪಿ ಬಿ ರಸ್ತೆಯಲ್ಲಿ ಕಡ್ಲೆ ಗಿಡ ಮತ್ತು ಚಹಾ ಮಾರಾಟ ಮಾಡಿ ಬೀದಿಗಿಳಿದು ಮಾರಾಟ ಮಾಡುವ ಮೂಲಕ ಅಥಿತಿ ಉಪನ್ಯಾಸಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಸುಮಾರು 50 ಕ್ಕು ಹೆಚ್ಚು ಗೆಸ್ಟ್ ಲೆಕ್ಟರರ್ ನಿಂದ ಪ್ರತಿಭಟನೆ ನಡೆದಿದ್ದು, ನಾವು ಪಿಎಚ್ ಡಿ, ನೆಟ್, ಸೆಟ್ ಪರೀಕ್ಷೆ ಪಾಸ್ ಮಾಡಿ ಅಥಿತಿ ಉಪನ್ಯಾಸಕರಾಗಿದ್ದೇವೆ. ಆದ್ರೆ ಸರ್ಕಾರ ನಮ್ಮನ್ನ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ನಮ್ಮನ್ನ ಖಾಯಂಗೊಳಿಸಿ, ಸರಿಯಾದ ವೇತನ ಕೊಡಿ ಎಂದು ಆಗ್ರಹ ಮಾಡಿದ್ದಾರೆ.
ಅಥಿತಿ ಉಪನ್ಯಾಸಕರ ಮೇಲಿನ ಶೋಷಣೆ ನಿಲ್ಲಲಿ ಎಂದು ಅಥಿತಿ ಉಪನ್ಯಾಸಕರು ಆಗ್ರಹಿಸಿದ್ದಾರೆ.