ಕೋಲಾರ : ಸೆಲ್ಫಿ ತೆಗೆಯುವಾಗ ಕೆರೆಗೆಬಿದ್ದ ಮಗಳ ರಕ್ಷಣೆಗೆ ಹೋಗಿ ತಂದೆಯೂ ಸಾವನ್ನಪ್ಪಿದ ಧಾರುಣ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಕಾಮಸಮುದ್ರ ಗ್ರಾಮದ ವೃಷಬಾವತಿ ಕೆರೆಯಲ್ಲಿ ನಡೆದಿದೆ.
ಬಾಗಲಕೋಟೆ: ನಾಳೆ ಜಮಖಂಡಿಗೆ ಪ್ರಿಯಾಂಕಾ ಗಾಂಧಿ ಆಗಮನ!
ಬೆಂಗಳೂರು ಮೂಲದ ಸೈಯದ್ ಅಯೂಬ್(35), ಫಾತಿಮಾ(10) ಮೃತ ರ್ದುದೈವಿಗಳು. ಮಜರಾಗೊಲ್ಲಹಳ್ಳಿಗೆ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ತಂದೆ ಮತ್ತು ಮಗಳು, ಕೆರೆ ನೋಡಲು ಹೋಗಿ ಸೆಲ್ಫಿ ತೆಗೆದುಕೊಳ್ಳುವಾಗ ಮಗಳು ಕಾಲುಜಾರಿಬಿದ್ದಿದ್ದಾಳೆ. ಈ ವೇಳೆ ಮಗಳು ಫಾತಿಮಾ ರಕ್ಷಿಸಲು ಕೆರೆಗೆ ಇಳಿದ ತಂದೆ ಅಯೂಬ್ ಕೂಡ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ