ಬೆಳಗಾವಿ: ದನದ ಕೊಠಡಿಯಂತಿರುವ ವರ್ಗಕೊಣೆಗಳು, ಸುಣ್ಣ ಬಣ್ಣದ ಭಾಗ್ಯ ಕಾಣದ ಶಾಲಾ ಕೊಠಡಿಗಳು ಶಾಲಾ ಕಾರ್ಯಲಯದಲ್ಲಿ ಸಂವಿದಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ ಸೇರಿದಂತೆ ಯಾವಬ್ಬ ಸ್ವತಂತ್ರ ಹೋರಾಟಗಾರರು ಮಹಾನ ವ್ಯಕ್ತಿಗಳ ಭಾವಚಿತ್ರ ಇರುವುದಿಲ್ಲ
ಇದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೊಡ ಪಟ್ಟದಣ ಶಾಲೆಯೊಂದರ ದು:ಸ್ಥಿತಿ
ಮಲ್ಲಿಕಾರ್ಜುನ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಡು ಬಂದ ದು:ಸ್ಥಿತಿ
ಶಾಲಾ ಮೈದಾನದ ತುಂಬೆಲ್ಲ ಅರಿಶಿನ ಒಣಗಿಸಲು ಹಾಕಿದ್ದಾರೆ, ಇದರಿಂದ ಮಕ್ಕಳಿಗೆ ಆಟ ಆಡಲು ತೊಂದರೆಯಾಗುತ್ತಿದೆ, ಮಕ್ಕಳ ಹಕ್ಕುಗಳನ್ನು ಕಸಿದುಕೊಂಡಂತಾಗಿದೆ
ಖಾಸಗಿ ವ್ಯಕ್ತಿಗಳ ಆಮಿಷಕ್ಕೆ ಒಳಗಾಗಿ ಶಾಲಾ ಮೈದಾನವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಅನ್ನೋ ಅನುಮಾನ ಡಿಟವಾಗಿದೆ
ಈ ಶಾಲೆ ಅನುದಾನಿತ ಶಾಲೆಯಾಗಿದ್ದು,ಸರ್ಕಾರದ ಅನುದಾನವನ್ನು ಎಲ್ಲಿ ಉಪಯೋಗಿಸಿಕೊಂಡರು..? ಶಾಲಾ ಅನುದಾನವನ್ನು ಶಾಲೆಗೆ ಉಪಯೋಗಿಸಿದ್ದೆಯಾದರೆ ಶಾಲೆ ಇಂತಹ ದುಸ್ಥಿತಿಗೆ ಬರ್ತಾ ಇರಲಿಲ್ಲ
ಶಾಲೆಗೆ ಕಾಂಪೌಂಡ್ ಕೂಡ ಇಲ್ಲಾ, ಶೌಚಾಲಯವಂತೂ ನಿರ್ವಹಣೆ ಇಲ್ಲದೆ ಗಬ್ಬುನಾರುತ್ತಿದೆ, ಇದರಿಂದ ಮಕ್ಕಳು ಬಹಿರ್ದೆಶೇಯನ್ನೇ ಅವಲಂಬಿಸಿದ್ದಾರೆ
ಶೌಚಾಲಯದಲ್ಲಿ ಗುಟುಕಾ ಸೇರಿದಂತೆ ತಂಬಾಕು ಉತ್ಪನಗಳ ಚೀಟಿ ಬಿದ್ದಿದ್ದು ಮಕ್ಕಳು ನರಕಯಾತಾನೆ ಪಡುತ್ತಿದ್ದಾರೆ
ಪ್ರದಾನಗುರು ಚಂದ್ರು ಲಮಾಣಿ ಅವರನ್ನು ಅವ್ಯವಸ್ಥೆ ಬಗ್ಗೆ ಕೇಳಿದರೆ ನಮಗೇನು ಗೊತ್ತಿಲ್ಲ ನಮ್ಮ ಸಂಸ್ಥೆಯ ಚೆರಮನ್ ಅವರಿಗೆ ಗೊತ್ತು ಅಂತಾ ಉಡಾಪೆ ಉತ್ತರ ನೀಡುತ್ತಾರೆ
ದೇವರು ವರಕೊಟ್ರು ಪೂಜಾರಿವರ ಕೊಡ್ಲಿಲ್ಲ ಅನ್ನೋ ಹಾಗೆ ಸರ್ಕಾರ ಅನುದಾನ ಬಂದ್ರು ಶಾಲೆಯ ಸುಧಾರಣೆಗೆ ಬಳಸದೆ, ಜೇಬಿಗೆ ಇಳಿಸುವ ಶಾಲಾ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ
ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಗಮನ ಹರಿಸಿ ಸೂಕ್ತ ಕ್ರಮ ಜರಿಗಿಸುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ
ವರದಿ : ಎಂ. ಕೆ. ಸಪ್ತಸಾಗರ