ಹುಬ್ಬಳ್ಳಿ ಅ.23: ಹುಬ್ಬಳ್ಳಿ ಧಾರವಾಡ ಬಸ್ ರಾಪಿಡ್ ಸಿಸ್ಟಮ್ (ಹೆಚ್ಡಿಬಿಆರ್ಟಿಎಸ್)ನ ವ್ಯವಸ್ಥಾಪಕ ನಿರ್ದೇಶಕರಾಗಿ ಸಾವಿತ್ರಿ ಬಿ.ಕಡಿ ಅವರು ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪ್ರಿಯಾಂಗ ಎಂ. ಅವರು ಹೆಚ್ಚುವರಿ ಪ್ರಭಾರ ವಹಿಸಿಕೊಂಡಿದ್ದರು. ಕರ್ನಾಟಕ ಸರ್ಕಾರ ಖಾಲಿ ಇರುವ ಹುದ್ದೆಗೆ ಸಾವಿತ್ರಿ ಬಿ. ಕಡಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
UIIC Jobs: ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯಲ್ಲಿ ಭರ್ಜರಿ ಉದ್ಯೋಗಾವಕಾಶ! ಬೇಗ ಅರ್ಜಿ ಹಾಕಿ
ಸಾವಿತ್ರಿ ಬಿ.ಕಡಿ ಅವರಿಗೆ ಹೆಚ್ಡಿಬಿಆರ್ಟಿಎಸ್ನ ವಿಶೇಷ ಭೂಸ್ವಾಧೀನಾಧಿಕಾರಿ ಗೀತ ಹೊನಕೇರಿ ಅವರು ಸಸಿ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪ್ರಧಾನ ವ್ಯವಸ್ಥಾಪಕರಾದ ರಮೇಶ್ ಗುಡ್ಡರಡ್ಡಿ, ರಾಜಕುಮಾರ .ಎಮ್ ಉಪಸ್ಥಿತರಿದ್ದರು.