ಸೈರಾಟ್ ಸಿನಿಮಾದ ಮೂಲಕ ಖ್ಯಾತಿ ಘಳಿಸಿದ ನಟಿ ರಿಂಕು ರಾಜಗುರು ಇದೀಗ ಖಾಸಗಿ ವಿಚಾರವಾಗಿ ಸುದ್ದಿಯಾಗಿದ್ದಾರೆ. ಸಂಸದ ಧನಂಜಯ್ ಮಹಾದಿಕ್ ಅವರ ಮಗನ ಜೊತೆಗಿರುವ ಫೋಟೋ ವೈರಲ್ ಆದ ಬೆನ್ನಲ್ಲೆ ಇದೀಗ ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.
ಕೃಷ್ಣರಾಜ್ ಮಹಾದಿಕ್ ಅವರು ರಿಂಕು ರಾಜಗುರು ಜೊತೆ ಕೊಲ್ಲಾಪುರ ಮಹಾಲಕ್ಷ್ಮಿ ದರ್ಶನ ಪಡೆದಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆ ಬಳಿಕ ಇಬ್ಬರು ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು.
ಕೊಲ್ಹಾಪುರ ಮಹಾಲಕ್ಷ್ಮಿ ದರ್ಶನ ನಂತರ ಪರಸ್ಪರ ಇಬ್ಬರು ಜೊತೆಗೆ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದನ್ನು ನೋಡಿದ ನೆಟ್ಟಿಗರು.. ರಿಂಕು ಮಹಾದಿಕಾ ಅವರ ಮೂರನೇ ಸೊಸೆ ಅಂತ ಕಾಮೆಂಟ್ ಮಾಡುತ್ತಿದ್ದಾರೆ.
ರಿಂಕು ಮತ್ತು ಕೃಷ್ಣರಾಜ್ ಅವರ ಫೋಟೋ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ನಟಿ ಕುಟುಂಬವು ಮೌನ ಮುರಿದಿದೆ. ಅಲ್ಲದೆ, ಅವರಿಬ್ಬರ ನಡುವೆ ಯಾವುದೇ ಸಂಬಂಧವಿಲ್ಲ.. ಅಂಬಾಬಾಯಿಯ ದರ್ಶನದ ಸಂದರ್ಭದಲ್ಲಿ ಕೊಲ್ಲಾಪುರದಲ್ಲಿ ಭೇಟಿಯಾಗಿದ್ದರು ಅಷ್ಟೇ ಅಂತ ಸ್ಪಷ್ಟ ಪಡಿಸಿದ್ದಾರೆ.
ರಿಂಕು ಜೊತೆಗಿನ ಫೋಟೋಗೆ ಮೊದಲು ಪ್ರತಿಕ್ರಿಯಿಸಿದವರು ಕೃಷ್ಣರಾಜ್ ಮಹಾದಿಕ್.. “ಫೋಟೋ ನೋಡಿ ದಾರಿ ತಪ್ಪಬೇಡಿ”. ರಿಂಕು ನನ್ನ ಒಳ್ಳೆಯ ಸ್ನೇಹಿತೆ ಅಷ್ಟೇ. ಒಂದು ಕಾರ್ಯಕ್ರಮಕ್ಕಾಗಿ ಕೊಲ್ಲಾಪುರಕ್ಕೆ ಬಂದಿದ್ದಳು. ಆ ಸಂದರ್ಭದಲ್ಲಿ ನಾನು ಮತ್ತು ರಿಂಕು ಭೇಟಿಯಾದೆವು. ಹಾಗಾಗಿ ಮಹಾಲಕ್ಷ್ಮಿ ದೇಗುಲಕ್ಕೆ ಒಟ್ಟಿಗೆ ಹೋದೆವು, ಒಟ್ಟಿಗೆ ಫೋಟೋ ತೆಗೆದುಕೊಂಡೆವು, ಅಷ್ಟೇ ಅಂತ ಸ್ಪಷ್ಟನೆ ನೀಡಿದ್ದಾರೆ.
ಆದ್ದರಿಂದ ದಯವಿಟ್ಟು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಆ ಫೋಟೋವನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಗುತ್ತಿದೆ. ನಾವು ಕೇವಲ ಒಳ್ಳೆಯ ಸ್ನೇಹಿತರು. ಅದನ್ನು ಮೀರಿ ನಮ್ಮ ನಡುವೆ ಏನೂ ಇಲ್ಲ ಎಂದು ಕೃಷ್ಣರಾಜ್ ಅವರು ತಿಳಿಸಿದ್ದಾರೆ.