ದಾವಣಗೆರೆ:- ನಾಳೆಯಿಂದ ಆರಂಭವಾಗಲಿರುವ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸೂರಗೊಂಡಪ್ಪದಲ್ಲಿನ ಸಂತ ಸೇವಾಲಾಲ್ ಜಯಂತಿಗೆ ಭಕ್ತರು ಹರಿದು ಬರುತ್ತಿದ್ದಾರೆ.
ಹೀಗೆ ಬರುವ ಮಾಲಾಧಾರಿಗಳಿಗೆ ಸಂವಿಧಾನ ಪೀಠಿಕೆ ಓದಿಸವುದು ನಡೆಸಲಾಗುತ್ತಿದೆ. ಫೆಬ್ರವರಿ 13,14,15 ರಂದು ನ್ಯಾಮತಿ ತಾ. ಸೂರಗೊಂಡನಕೊಪ್ಪದಲ್ಲಿ ನಡೆಯುವ ಸಂತ ಸೇವಾಲಾಲ್ ಜಯಂತಿಯಲ್ಲಿ ಭಾಗಿಯಾಗಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹಾಗೂ ಮಾಲಾಧಾರಿಗಳು ಆಗಮಿಸುತ್ತಿದ್ದಾರೆ.
ಇವರಿಗೆ ಆಯುಷ್ ಇಲಾಖೆಯಿಂದ ಹರಿಹರ ತಾಲ್ಲೂಕಿನ ಕೊಮಾರನಹಳ್ಳಿ ಮತ್ತು ಹೊನ್ನಾಳಿಯ ಹೀರೇಕಲ್ಮಠದಲ್ಲಿ ಮುಲಾಮು ವಿತರಿಸಿ ಆರೈಕೆ ಮಾಡಲಾಗುತ್ತಿದೆ. ಮತ್ತು ಮಾಲಾಧಾರಿಗಳಿಗೆ ಸಂವಿಧಾನ ಪೀಠಿಕೆ ಓದಿಸಲಾಗುತ್ತಿದೆ. ಇನ್ನು ಮೂರು ದಿನಗಳ ಕಾಲ ಸೂರಗೊಂಡನಕೊಪ್ಪಸಲ್ಲಿ ಅದ್ಧೂರಿಯಾದ ಜಾತ್ರೆ ನಡೆಯುತ್ತದೆ.