ಚಾಮರಾಜನಗರ: ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ವಿದ್ಯಾರ್ಥಿಗಳ ಜೊತೆ ವಾಲಿಬಾಲ್ ಆಡುವ ಮೂಲಕ ಮತಯಾಚನೆ ಮಾಡಿದ್ದಾರೆ. ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿನ ಸೇವಾಭಾರತಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಜೊತೆ ವಾಲಿಬಾಲ್ ಆಟ ಆಡುವ ಮೂಲಕ ಮತಯಾಚನೆ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ನರೇಂದ್ರಮೋದಿಯನ್ನು ಮೂರನೇ ಬಾರಿ ಪಿ.ಎಂ.ಮಾಡಲು ಮತಯಾಚಿಸಿದರು. ಮೊದಲ ಬಾರಿ ಮತಚಲಾಯಿಸುವ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿ ಆಯ್ಕೆ ಮಾಡುವಂತೆ ಹಾಗೂ ದೇಶಕ್ಕಾಗಿ ಯುವಕರು ಮತದಾನವನ್ನು ಖಡ್ಡಾಯವಾಗಿ ಮಾಡುವಂತೆ ಬಾಲರಾಜ್ ಮನವಿ ಮಾಡಿದರು. ಈ ವೇಳೆ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಿ.ಎಸ. ನಿರಂಜನ ಕುಮಾರ್ ಸಾಥ್ ನೀಡಿದರು.