ಬಾಗಲಕೋಟ :- ಆಧುನಿಕ ಯುಗದ ಭರಾಟೆಯಲ್ಲಿಯೂ ಕೂಡ ನಮ್ಮ ಗ್ರಾಮೀಣ ಭಾಗದ ಪದ್ದತಿ ಸಂಪ್ರದಾಯಗಳು ಇನ್ನೂ ಜೀವಂತವಾಗಿವೆ.
BSP ತಮಿಳುನಾಡು ಅಧ್ಯಕ್ಷ ಆರ್ಮ್ಸ್ಟ್ರಾಂಗ್ ಹತ್ಯೆ ಕೇಸ್: 8 ಮಂದಿ ಪೊಲೀಸರು ವಶಕ್ಕೆ
ಇದಕ್ಕೆ ಸಾಕ್ಷಿಯೆನ್ನುವಂತೆ ರೈತ ಬಾಂಧವರ ಹಬ್ಬವೆಂದೇ ಪ್ರಖ್ಯಾತಿ ಪಡೆದಿರುವ ಮಣ್ಣೆತ್ತಿನ ಅಮವಾಸ್ಯೆಗೆ ಸಿದ್ಧತೆಗಳು ಭರ್ಜರಿ ನಡೆದಿವೆ. ಮುಂಗಾರು ಹಂಗಾಮಿನ ಸಫಲತೆಗೆ ಭಗವಂತನನ್ನ ಪೂಜಿಸಿ ಪ್ರಾರ್ಥಿಸಲು ಅಣಿಯಾಗಿದ್ದು,ಇತ್ತ ಬಾಗಲಕೋಟೆ ತಾಲೂಕಿನ ಸೀಮಿಕೇರಿ ಗ್ರಾಮದಲ್ಲಿ ಮಣ್ಣಿನ ಎತ್ತುಗಳನ್ನು ತಯಾರಿಸಲಾಗುತ್ತಿದೆ.
ಬಸವರಾಜ ಕುಂಬಾರ ಅವರು ಪ್ರತೀ ವರ್ಷದಂತೆ ಈ ವರ್ಷವೂ ಮಣ್ಣಿನ ಎತ್ತುಗೞ ತಯಾರಿಕೆಯಲ್ಲಿ ತೊಡಗಿದ್ದಾರೆ. ಮಣ್ಣೆತ್ತಿನ ಅಮವಾಸ್ಯೆಯ ದಿನ ರೈತ ಬಾಂಧವರು ಮಣ್ಣನಿಂದ ತಯಾರಿಸಿದ ಎತ್ತುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ,ದೇವರ ಜಗಲಿಯ ಮೇಲಿಟ್ಟು ಪೂಜಿಸಿ ಉತ್ತಮ ಮಳೆ-ಬೆಳಗಾಗಿ ಪ್ರಾರ್ಥಿಸಲಾಗುತ್ತೆ.
ನಾಗಪಂಚಮಿಯ ವರೆಗೆ ಮಣ್ಣಿನ ಎತ್ತುಗಳನ್ನ ಮನೆಯ ಜಗುಲಿಯೇಲೆ ಇಟ್ಟು ಪೂಜಿಸಿ ನಂತರ ಬಾವಿಯಲ್ಲಿ, ಕೆರೆ ನದಿಗಳಲ್ಲಿ ವಿಸರ್ಜನೆ ಮಾಡಲಾಗುತ್ತೆ.
ಒಟ್ಟಾರೆ ಬಾಗಲಕೋಟೆ ಜಿಲ್ಲೆಯಲ್ಲಿ ಮಣ್ಣೆತ್ತಿನ ಅಮವಾಸ್ಯೆಯ ಸಂಭ್ರಮ ಮನೆ ಮಾಡಿದೆ.ಇನ್ನು ಮಣ್ಣೆತ್ತಿನ ಅಮವಾಸ್ಯೆಯ ಮಹತ್ವದ ಕುರಿತು ಮಣ್ಣಿನ ಎತ್ತುಗಳ ತಯಾರಕ ಬಸವರಾಜ ಕುಂಬಾರ ಅವರು ಮಾತನಾಡಿದ್ದಾರೆ.