ಕೋಲಾರ: ಕಾಂಗ್ರೆಸ್ ಸರ್ಕಾರದ ಸೌಲಭ್ಯ ಜನರಿಗೆ ಸಿಕ್ಕಿದರೆ ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕಿ ಇಲ್ಲ ಅಂದರೆ ನಮಗೆ ಓಟು ಹಾಕಬೇಡಿ ಎಷ್ಟು ಮನೆಗೆ ಸರ್ಕಾರದ ಸೌಲಭ್ಯ ಸಿಕ್ಕಿದರೆ ಅಷ್ಟು ಓಟು ಹಾಕಿ ನಾವು ನುಡಿದಂತೆ ನಡೆದಿದ್ದೆವೆ ಎಂದು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಅವ್ರು ಹೇಳಿದ್ರು. ಕೋಲಾರ ತಾಲೂಕಿನ ಸೂಲೂರು ಚೌಡದೇನಹಳ್ಳಿ, ಬೆಳ್ಳೂರು, ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ ವಿ ಗೌತಮ್ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ರು,
ಕಾಂಗ್ರೆಸ್ ಸರ್ಕಾರದ ಸೌಲತ್ತು ನಾವು ಮಾಡಿರುವ ಕೆಲಸ ನಿಮಗೆ ಇಷ್ಟವಾಗಿದ್ದರೆ ನಮಗೆ ಓಟು ಹಾಕಿ ನಾವು ಕೆಲಸವನ್ನು ಮಾಡುತ್ತಿದ್ದೆವೆ ಎಲ್ಲರು ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕಿ ನಾವು ಕೆಲಸ ಮಾಡಿದ್ದರೆ ಓಟು ಹಾಕಿ ನಾವು ಕೆಲಸ ಮಾಡಿಲ್ಲ ತಪ್ಪು ಮಾಡಿದ್ದರೆ ಓಟು ಹಾಕಬೇಡಿ ಎಂದು ಹೇಳಿದರು. ಜನರಿಗೋಸ್ಕರ ದಿನವಿಡಿ ಕೆಲಸ ಮಾಡುವುದು ನನ್ನ ಕೆಲಸ ಬಿಜೆಪಿಯವರು ಕಾಂಗ್ರೆಸ್ ಅಭ್ಯರ್ಥಿ ಹೊರಗಿನವರು ಅಂತ ಹೇಳುತ್ತಾರೆ.
ಎನ್ ಡಿ ಎ ಅಭ್ಯರ್ಥಿ ಮಲ್ಲೇಶ್ ಬಾಬು ಕೋಲಾರ ತಾಲೂಕಿನವರು ಅವರ ಅಸ್ಲೆಂಬಿ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತದೆ ತೋರಿಸಿಕೊಟ್ಟಿದ್ದು ಬಿಜೆಪಿಯವರು ಹೆಚ್ ಡಿ ಕುಮಾರಸ್ವಾಮಿ ಹುಟ್ಟಿದ್ದು ಹಾಸನ ಎಲೆಕ್ಷನ್ ನಿಂತಿದ್ದು ಎಲ್ಲಿ ರಾಮನಗರ ಚನ್ನಪಟ್ಟಣ ಚಿಕ್ಕಬಳ್ಳಾಪುರ ಇವಾಗ ಮಂಡ್ಯ ಅವರೆಲ್ಲ ಎಲ್ಲಿ ಬೇಕಾದರು ಹೋಗಬಹುದು ಎಂದು ಟಾಂಗ್ ನೀಡಿದ್ರು.
ಎಲ್ಲರು ನಮ್ಮ ಕರ್ನಾಟಕದವರೆ ನಮಗೆ ಬಿಜೆಪಿಯವರೆ ದಾರಿ ದೀಪ ಹೊರಗಿನವರನ್ನು ಹಾಕುವುದಕ್ಕೆ ಎಂದು ತಿಳಿಸಿದ್ರು. ಏಪ್ರಿಲ್ 17 ರಂದು ರಾಹುಲ್ ಗಾಂಧಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿಗೆ ಆಗಮಿಸುತ್ತಿದ್ದಾರೆ ಆ ಸಭೆಯನ್ನು ಯಶಸ್ವಿಗೊಳಿಸುತ್ತೆವೆ ಇದುವರೆಗು ನಾನು ಹೇಳಿರುವುದು ಎಲ್ಲವು ನಿಜವಾಗಿದೆ ಕಾಂಗ್ರೆಸ್ ಅಭ್ಯರ್ಥಿ ಕೆವಿ ಗೌತಮ್ ಗೆಲ್ಲುತ್ತಾರೆ ಎಂದು ಹೇಳಿದ್ರು.