ಆಂಕರ್: ಏಕಾಏಕಿ ಮನೆಯ ಮೇಲ್ಛಾವಣಿ ಕುಸಿದು ಆಕಳು ಸಾವನ್ನಪ್ಪಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ನಡೆದಿದೆ.
ಮಹದೇವಪ್ಪ ಕುಲಕರ್ಣಿ ಎಂಬವರ ಮನೆ ಮೇಲ್ಛಾವಣಿ ಕುಸಿದಿದೆ. ಪವಾಡ ಎಂಬಂತೆ ಮನೆಯಲ್ಲಿದ್ದ ಮಹದೇವಪ್ಪ ಪತ್ನಿ ಲಲಿತಮ್ಮ ಹಾಗೂ ಇಬ್ಬರು ಮಕ್ಕಳಾದ ಪ್ರಶಾಂತ, ಶಂಕ್ರು ಬಚಾವ್ ಆಗಿದ್ದಾರೆ. ಆದರೆ ಮನೆಯಲ್ಲಿ ಕಟ್ಟಿದ್ದ ಎರಡು ಹಸುಗಳು ಪೈಕಿ, ಒಂದು ಹಸು ಸಾವನ್ನಪ್ಪಿದ್ದರೆ, ಇನ್ನೊಂದು ಸೇಫ್ ಆಗಿದೆ.
ಏಕಾಏಕಿ ಮನೆಯ ಮೇಲ್ಟಾವಣಿ ಕುಸಿದಿದೆ. ಅದರ ಸದ್ದು ಕೇಳಿ ಮನೆಯಿಂದ ಕುಟುಂಬಸ್ಥರು ಹೊರಗೆ ಓಡಿ ಬಂದಿದ್ದಾರೆ. 5 ಅಂಕಣ ಮನೆಯಲ್ಲಿ 3 ಅಂಕಣದ ಮೇಲ್ಛಾವಣಿಯ ದನದ ಕೊಟ್ಟಿಗೆ ಸಂಪೂರ್ಣ ಕುಸಿದಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮನೆ ಹಾನಿಯಾಗಿದ್ದು, ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಪಿಡಿಓ, ಹಾಗೂ ನಾಡ ಕಾರ್ಯಾಲಯ ಅಧಿಕಾರಿಗಳು, ಪಶು ವೈದ್ಯರು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.