ಬೆಂಗಳೂರು: ಬೆಂಗಳೂರು ನಗರದಲ್ಲಿ ಬಿರು ಬೇಸಿಗೆ ಆರಂಭವಾದ ಬಳಿಕ ದಿನೇದಿನೇ ಹನಿ ಹನಿ ನೀರಿಗೂ ಹಾಹಾಕಾರ ಶುರುವಾಗಿ ಕುಡಯಲು ಹಾಗೂ ದಿನ ನಿತ್ಯದ ಬಳಕೆಗೆ ಜನರು ಪರಿತಪ್ಪಿಸುವಂತಾಗಿದೆ. ಜೀವ ಜಲ ಕುಡಿಯುವ ನೀರಿಗಾಗಿ ಜನರು ಸರ್ಕಾರ ಹಾಗೂ ಅಧಿಕಾರಿಗಳ ಗಮನ ಸೆಳೆಯಲು ಖಾಲಿ ಬಿಂದಿಗೆ ಹಿಡಿದು ವಿನೂತನ ಪ್ರತಿಭಟನೆ ಮಾಡಿ ಆಗ್ರಹಿಸಿದ್ದಾರೆ. ಎಲ್ಲಿ ಏಕೆ ಈ ವಿನೂತನ ಪ್ರತಿಭಟನೆ ಅಂತೀರ ಹಾಗಾದರೆ ಈ ಸ್ಟೋರಿ ನೋಡಿ..
ಹೌದು ಈ ಬಿರು ಬೇಸಿಗೆಯಲ್ಲಿ ಜನರು ಕುಡಿಯುವ ನೀರು ಹಾಗೂ ದಿನನಿತ್ಯದ ಬಳಕೆಗೆ ಜೀವ ಜಲಕ್ಕೆ ಪರಿತಪ್ಪಿಸುವಂತಾಗಿದ್ದು, ಸರ್ಕಾರದ ವಿರುದ್ದ ದಿಕ್ಕಾರ ಕೂಗಿ ಜನರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಲ್ಲಸಂದ್ರ ವಾಡ್೯ ನ ಗುಟ್ಟೆ ಬಡಾವಣೆಯ ನಿವಾಸಿಗಳಿಗೆ ಕಳೆದ ಮೂರು ತಿಂಗಳಿನಿಂದ ಕಾವೇರಿ ನೀರು ಹಾಗೂ ಸ್ಥಳೀಯ ಸಿಎಂಸಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಇಲ್ಲಿನ ಮಹಿಳೆಯರು ಖಾಲಿ ಕೊಡ ಹಿಡಿದು ನೀರು ಕೊಡಿ ಎಂದು ದಿಕ್ಕಾರ ಹಾಕಿದ ಜನಸಾಮಾನ್ಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ಬಡಾವಣೆಯಲ್ಲಿ ಬಿರು ಬೇಸಿಗೆ ಆರಂಭವಾದ ಕಳೆದ ಮೂರು ತಿಂಗಳಿಂದ ಕಾವೇರಿ ಹಾಗೂ ಸ್ಥಳೀಯ ಬಿಬಿಎಂಪಿ ನೀರಿನ ಸಮಸ್ಯೆ ಎದುರಿಸುತ್ತಿರುವ ಜನರು ಸಾಕಷ್ಟು ಬಾರಿ ನೀರಿನ ಟ್ಯಾಂಕರ್ ಮೂಲಕ ತುಂಬಿಸುವ ಕೆಲಸ ಮಾಡಿದ್ರು ಶಾಶ್ವತ ಪರಿಹಾರ ಮಾತ್ರ ಸಿಕ್ಕಿಲ್ಲ, ಇನ್ನೂ ಈ ಬಿರು ಬೇಸಿಗೆಯಲ್ಲಿ ಒಂದು ವಾರಕ್ಕೆ ಸ್ನಾನ ಮಾಡುವ ಪರಿಸ್ಥಿತಿ ಬಂದಿದೆ ಎಂದು ತಮ್ಮ ಅಳಲನ್ನ ವ್ಯಕ್ತಪಡಿಸಿದ್ದು,
ಸರ್ಕಾರದ ವಿರುದ್ಧ ಖಾಲಿ ಕೊಡ ಹಿಡಿದು ವಿನೂತನ ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡಿದ್ದಾರೆ. ಒಟ್ಟಾರೆ ಈ ಬಿರು ಬೇಸಿಗೆಯಲ್ಲಿ ವಾತಾವರಣದಲ್ಲಿ ತಾಪಮಾನ ಏರಿಕೆಯಾದಂತೆ, ಜೀವ ಜಲ ನೀರಿನ ಅಭಾವ ಕೂಡ ಇಳಿಕೆಯಾಗಿ ಜನರ ನಿದ್ರೆ ಕೆಡೆಸುವಂತೆ ಮಾಡಿದೆ. ಇನ್ನಾದರು ಅಧಿಕಾರಿಗಳು ನೀರಿನ ಅಭಾವ ತಪ್ಪಿಸುವ ಕೆಲಸಕ್ಕೆ ಮುಂದಾಗುತ್ತಾರ ಕಾದು ನೋಡಬೇಕಿದೆ.