ಬಳ್ಳಾರಿ: ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಬೆಳಗಾವಿಯಲ್ಲಿ ತುಂಗಾಭದ್ರ ಜಲಾಶಯ ನೀರಾವರಿ ಸಲಹಾ ಸಮಿತಿ ಸಭೆ ಏರ್ಪಡಿಸಲಾಯಿತು. ರೈತರ ಜಮೀನುಗಳಿಗೆ ನೀರು ಹರಿಸುವ ಕುರಿತು ಅವಳಿ ಜಿಲ್ಲೆಯ ಜನಪ್ರತಿನಿಧಿಗಳು, ರೈತರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಬಳ್ಳಾರಿಯ ಮೆಣಸಿಕಾಯಿ ಬೆಳೆ ಬರಲು ನೀರಿನ ಅವಶ್ಯಕತೆಯಿದೆ, ಜಲಾಶಯದಲ್ಲಿ ಇರುವ ನೀರಿನ ಪ್ರಮಾಣ ನೋಡಿ ಕಾಲುವೆಗೆ ನೀರು ಹರಿಸುವಂತೆ ರೈತರು ಮನವಿ ಮಾಡಿದ್ದಾರೆ.
ತೆಲಂಗಾಣ, ಆಂಧ್ರಾದ ಪಾಲಿನ ನೀರು ಉಳಿಸಿ ನಮ್ಮ ಬೆಳೆ ರಕ್ಷಣೆ ಮಾಡುವಂತೆ ರೈತರು ಪಟ್ಟು ಹಿಡಿದಿದ್ದು, ಟಿಬಿ ಡ್ಯಾಂನಲ್ಲಿ 12 ಟಿಎಂಸಿ ನೀರು ಮಾತ್ರ ಇದೆ, ಮೆಣಿಸಿಕಾಯಿ ಬೆಳೆ ಬರಲು ಇನ್ನು ಎರಡು ತಿಂಗ್ಳು ಬೇಕಿದೆ. ಹಾಗಾಗೀ ಕಾಲುವೆ ನೀರು ಹರಿಸುವಂತೆ ಆಗ್ರಹಿಸಿದ್ದಾರೆ. ಎಚ್ಎಲ್’ಸಿ ಕಾಲುವೆ ನೀರು ಹರಿಸುವಂತೆ ಜಿಲ್ಲೆಯ ರೈತರಿಂದ ಮನವಿ ಮಾಡಲಾಗಿದ್ದು, ಸಭೆಯಲ್ಲಿ ಸಚಿವ ನಾಗೇಂದ್ರ, ಸಚಿವ ಜಮೀರ್, ಶಾಸಕ ಗಣೇಶ್, ಬಿ.ಎಂ ನಾಗರಾಜ್, ಭರತ್ ರೆಡ್ಡಿ ಭಾಗಿಯಾಗಿದ್ದರು.