ಗದಗ: ಕಲುಶಿತ ನೀರಿನ ಗುಂಡಿಯೊಳಗೆ ಆಕಸ್ಮಾತಾಗಿ ಬಿದ್ದು ಒದ್ದಾಡುತ್ತಿದ್ದ ಗೂಳಿಯನ್ನ ರಕ್ಷಣೆ ಮಾಡೋ ಮೂಲಕ ಮಾನವೀಯತೆಯನ್ನ ಮೆರೆಯಲಾಗಿದೆ. ಗದಗ ರೈಲ್ವೆ ಸ್ಟೇಷನ್ ಎದುರಿನ ಕ್ವಾಟ್ರಸ್ ಹತ್ತಿರ ಇರೋ ಕಲುಶಿತ ನೀರಿನ ಗುಂಡಿಯಲ್ಲಿ ಗೂಳಿಯೊಂದು ಬಿದ್ದು ಮೆಲೇಳಲಾರದೇ ಒದ್ದಾಡುತ್ತಿದ್ದದ್ದನ್ನ ಕಂಡ ಗೋರಕ್ಷಕ ಸತೀಶ್ ಪೂಜಾರ್ ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ತಿಳಿಸಿದ್ದಾರೆ.
ತತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ತಂಡ, ಕಬ್ಬಿಣದ ರಾಡ್ ಗಳನ್ನ ಕತ್ತರಿಸಿ ಜೆಸಿಬಿ ಹಾಗೂ ಹಗ್ಗದ ಸಹಾಯದಿಂದ ಗೂಳಿಯನ್ನ ಗುಂಡಿಯಿಂದ ಮೇಲೆತ್ತೋ ಮೂಲಕ ಗೂಳಿಯನ್ನ ರಕ್ಷಣೆ ಮಾಡಿದ್ದಾರೆ. ಸ್ಥಳೀಯ ಸಾರ್ವಜನಿಕರು ಅಗ್ನಿಶಾಮಕ ದಳ ಹಾಗೂ ಗೋ ರಕ್ಷಕ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
![](https://ainlivenews.com/wp-content/uploads/2024/01/Ad-Banner-copy-scaled.jpg)