ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯಲ್ಲಿನ ವಿಮಾನ ನಿಲ್ದಾಣದ ಟರ್ಮಿನಲ್ ಮೂರು ವಿಸ್ತರಣೆ ಮಾಡಲು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ಪದಾಧಿಕಾರಿಗಳು ಸಚಿವ ಪ್ರಲ್ಹಾದ್ ಜೋಶಿ ಅವರಲ್ಲಿ ಮನವಿ ಮಾಡಿದರು.
India vs Canada: ಭಾರತ V/s ಕೆನಡಾ ಪಂದ್ಯಕ್ಕೆ ಮಳೆ ಕಾಟ.. ಟಾಸ್ ವಿಳಂಬ!
ಹಳೆಯಯೋಜನೆಗಳಾದ ಹುಬ್ಬಳ್ಳಿಯಿಂದ ಮುಂಬೈ, ಜೋಧಪುರ, ಅಹಮದಾಬಾದ್ ಮತ್ತು ಕೊಚ್ಚಿಯಂಥ ಸ್ಥಳಗಳಿಗೆ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ವಿಮಾನಗಳನ್ನು ಮರು ಪ್ರಾರಂಭಿಸಬೇಕು. ಬೆಳಗಾವಿ- ಸೂರತ್ ವಿಮಾನ ಸೇವೆ ಆರಂಭಿಸಬೇಕು. ಇಂಡಿಗೋದಿಂದ ಹುಬ್ಬಳ್ಳಿ- ಅಹಮದಾಬಾದ್ ವಿಮಾನ ಸೇವೆ ಹಿಂತೆಗೆದುಕೊಳ್ಳಲಾಗಿದೆ.
ಸ್ಟಾರ್ ಏರ್ ವಿಮಾನಗಳ ಕೊನೆಯ ನಿಮಿಷದ ರದ್ದತಿಯಿಂದ ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ತೊಂದರೆಯಾಗಿದೆ. ಅಹಮದಾಬಾದ್, ಗೋವಾ, ಮುಂಬೈ, ಬೆಂಗಳೂರು, ಹಿಂಡನ್ (ದೆಹಲಿ) ಮತ್ತು ತಿರುಪತಿಯಂಥ ನಗರಗಳಿಗೆ ವಿಮಾನಗಳನ್ನು ಮರು ಆರಂಭಿಸಬೇಕು. ಅಳ್ಳಾವರ ರೈಲ್ವೆ ನಿಲ್ದಾಣದಲ್ಲಿ ಪ್ರಸ್ತಾವಿತ ಫೂಟ್ ಓವರ್ ಬ್ರಿಡ್ಜ್ ನಿರ್ಮಿಸಬೇಕು. ಹುಬ್ಬಳ್ಳಿ-ಅಂಕೋಲಾ ಹಾಗೂ ಹುಬ್ಬಳ್ಳಿ-ಬೆಳಗಾವಿ (ವಯಾ ಕಿತ್ತೂರ) ರೈಲ್ವೆ ಲೈನ್ ತ್ವರಿತವಾಗಿ ಅನುಷ್ಠಾನಕ್ಕೆ ತರಬೇಕು ಎಂದು ವಿನಂತಿಸಿದರು. ಮನವಿ ಸ್ವೀಕರಿಸಿದ ಸಚಿವರು, ಈ ಎಲ್ಲ ಬೇಡಿಕೆಗಳನ್ನು ಪರಿಶೀಲಿಸಿ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದರು. ಕೆಸಿಸಿಐ ಅಧ್ಯಕ್ಷ ಎಸ್.ಪಿ. ಸಂಶಿಮಠ, ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಕಾರ್ಯದರ್ಶಿಗಳಾದ ರವೀಂದ್ರ ಬಳಿಗಾರ, ಮಹೇಂದ್ರ ಸಿಂಘಿ, ಮಾಜಿ ಅಧ್ಯಕ್ಷ ಎಂ.ಸಿ. ಹಿರೇಮಠ, ಪದಾಧಿಕಾರಿಗಳು ಮುಂತಾದವರಿದ್ದರು