ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮಕ್ಕೆ ಆರೋಗ್ಯ ಉಪಕೇಂದ್ರಕ್ಕೆ ಅನುದಾನ ಮಂಜೂರು ಮಾಡುವಂತೆ ಆಗ್ರಹ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮನವಿ ಸಲ್ಲಿಸಲಾಯಿತು
ಈಗಾಗಲೇ ಸಂಬಂಧಪಟ್ಟ ಆರೋಗ್ಯ ಇಲಾಖೆಯವರಿಗೆ ಮನವಿ ಸಲ್ಲಿಸಿದ್ದು ಮನವಿಗೆ ಸರಿಯಾಗಿ ಸ್ಪಂದನೆ ಸಿಕ್ಕಿಲ್ಲ ಕಳೆದ ತಿಂಗಳ ಹಿಂದೆ ಇಲಾಖೆಯ ಪರವಾಗಿ ಇಂಜಿನಿಯರ್ ಗ್ರಾಮಕ್ಕೆ ಭೇಟಿ ನೀಡಿ ಅಳತೆ ಮಾಡಿಕೊಂಡು ಹೋಗಿ ಒಂದು ತಿಂಗಳದಲ್ಲಿ ಕೆಲಸ ಪ್ರಾರಂಭಿಸುವದಾಗಿ ಹೇಳಿದ್ದರು
ಆದರೆ ಇಲ್ಲಿಯವರೆಗೂ ಯಾವುದೇ ಕಾಮಗಾರಿಯೂ ಆಗಿಲ್ಲ ಅನುದಾನ ಬಿಡುಗಡೆಯು ಮಾಡಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿ ಶೀಘ್ರ ಕಾಮಗಾರಿಯನ್ನು ಆರಂಭಿಸಬೇಕೆಂದು ರತ್ನ ಭಾರತ ರೈತ ಸಮಾಜದ ವತಿಯಿಂದ ಮನವಿ ಮಾಡಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು ಆದಷ್ಟು ಬೇಗನೆ ಈ ಕಾಮಗಾರಿ ಆರಂಭಿಸುವಂತೆ ಆದೇಶಿಸುತ್ತೇನೆ ನಮ್ಮ ಯೋಗಪ್ಪನವರ ಇವರು ಒಳ್ಳೆ ಕಾರ್ಯಕ್ಕೆ ಕೈಹಾಕಿದ್ದಾರೆ ಅವರ ಕೈ ಬಲ ಪಡಿಸುತ್ತೇನೆ ಎಂದು ಭರವಸೆ ನೀಡಿದರು ಈ ಸಂದರ್ಭದಲ್ಲಿ ರತ್ನ ಭಾರತ ರಾಷ್ಟ್ರೀಯ ಉಪಾಧ್ಯಕ್ಷ ಹೇಮನಗೌಡ ಬಸನಗೌಡ ವಾಯುವ್ಯ ಸಾರಿಗೆ ಮಾಜಿ ಅಧ್ಯಕ್ಷರು ಸದಾನಂದ ಡಂಗನವರ್ ಸಮಾಜ ಸೇವಕ ಬಸವರಾಜ ಯೋಗಪ್ಪನವರ ಕಾಂಗ್ರೆಸ್ ಮುಖಂಡ ರಮೇಶ್ ಕೊಪ್ಪದ ಚನ್ನಬಸಪ್ಪ ಸಿದ್ದನವರ ಎಲ್ ಕೆ ಶಿವನಗೌಡ ರಾಜು ಮಲ್ಲಿಗವಾಡ ಮತ್ತುಮ್ ಸಾಬ್ ಎಲಿಗ್ಯಾರ್ ಶಾಂತಪ್ಪ ಕುಸುಗಲ್ ಬಸಪ್ಪ ನೀರಲಗಿ ಹಾಗೂ ಇನ್ನಿತರು ಇದ್ದರು