ಚಿತ್ರದುರ್ಗ:- ರೇಣುಕಾಸ್ವಾಮಿ ಹತ್ಯೆ ಪ್ರಕರಣ ಖಂಡನೀಯ, ಆರೋಪಿಗಳಿಗೆ ಶಿಕ್ಷೆ ಆಗಲಿ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ.
Breaking: ಜೂ. 18ಕ್ಕೆ ವಾರಾಣಸಿಗೆ ಭೇಟಿ ಕೊಡಲಿದ್ದಾರೆ ಪ್ರಧಾನಿ ಮೋದಿ..!
ಈ ಸಂಬಂಧ ಮಾತನಾಡಿದ ಅವರು,ನಾಗರಿಕ ಸಮಾಜದಲ್ಲಿ ಇಂತಹ ಅಹಿತಕರ ಘಟನೆ ಆಗಬಾರದು. ಸರ್ಕಾರ ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಯಾರೇ ತಪ್ಪು ಮಾಡಿದ್ದರೂ ಕಠಿಣ ಶಿಕ್ಷೆಯಾಗಬೇಕು ಎಂದರು.
ಅಪಹರಿಸಿ ಕರೆದೊಯ್ದು ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಗಿದೆ. ವಿಷಯ ತಿಳಿದು ಮನಸ್ಸಿಗೆ ಆಘಾತವಾಯಿತು. ಹುಬ್ಬಳ್ಳಿ, ಚಿತ್ರದುರ್ಗದಲ್ಲಿ ಪದೇಪದೆ ಇಂತಹ ಘಟನೆ ನಡೆಯುತ್ತಿದೆ. ಸರ್ಕಾರ ಇಂತಹ ಪ್ರಕರಣದ ಬಗ್ಗೆ ವಿಶೇಷ ತನಿಖೆ ಮಾಡಿಸಬೇಕು.
ಪ್ರಕರಣದಲ್ಲಿ ಯಾರೇ ಇರಲಿ ತನಿಖೆಯಿಂದ ಸತ್ಯ ಹೊರಬರಲಿ. ರೇಣುಕಾ ಸ್ವಾಮಿಯಿಂದ ನೋವಾಗಿದ್ದರೆ ದೂರು ನೀಡಬಹುದಿತ್ತು. ಸರ್ಕಾರ ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಿ, ಮೃತನ ಪತ್ನಿಗೆ ಕೆಲಸ ಕೊಟ್ಟು ಕುಟುಂಬ ಕಾಪಾಡುವ ಕೆಲಸ ಮಾಡಲಿ ಎಂದು ಹೇಳಿಕೆ ನೀಡಿದ್ದಾರೆ.