ಬೆಂಗಳೂರು:- ದರ್ಶನ್ ಕೇಸ್ನಲ್ಲಿ ಯಾವುದೇ ಮೃದು ಧೋರಣೆ ಇಲ್ಲ ಎಂದು ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿಗರೇ ವೀಕೆಂಡ್ ನಲ್ಲಿ ಎಲ್ಲೋಗ್ಬೇಕು ಅಂತ ಯೋಚಿಸ್ತಿದ್ದೀರಾ!?.. ಈ ಬೆಸ್ಟ್ ಪ್ಲೇಸ್ ಗಳಿಗೆ ಒಮ್ಮೆ ಭೇಟಿ ಕೊಡಿ!
ಚಿತ್ರದುರ್ಗದ ರೇಣುಕಾಸ್ವಾಮಿಗೆ ವಿದ್ಯುತ್ ಶಾಕ್ ಕೊಟ್ಟ ವಿಚಾರ ನಿಮಗೆ ಹೇಗ್ರಿ ಗೊತ್ತಾಯ್ತು? ಅಂತಾ ಮಾಧ್ಯಮಗಳ ವಿರುದ್ಧ ಗರಂ ಆಗಿದ್ದಾರೆ? ಮುಂದುವರಿದು, ತನಿಖೆ ನಡೆಯುತ್ತಿದೆ. ಬಹಿರಂಗವಾಗಿ ನಾವು ಏನನ್ನೂ ಹೇಳಲು ಆಗಲ್ಲ. ತನಿಖೆಯ ವರದಿ ಬಂದಮೇಲೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಸಿಎಂ ಕೂಡ ಹೇಳಿರುವುದಾಗಿ ತಿಳಿಸಿದ್ದಾರೆ.
ನಾವು ಯಾವ ಒತ್ತಡಕ್ಕೂ ಮಣಿಯುವುದಿಲ್ಲ. ಪೊಲೀಸ್ ತನಿಖೆಯ ಟೈಮ್ ಬಾಂಡ್ ಅವರಿಗೆ ಬಿಟ್ಟಿದ್ದು. ಆಡಳಿತಾತ್ಮಕವಾಗಿ ಗಿರೀಶ್ ನಾಯ್ಕ್, ತನಿಖಾ ಅಧಿಕಾರಿಗಳ ಬದಲಾವಣೆ ಸೇರಿದಂತೆ ಸಮರ್ಥವಾಗಿರುವ ಅಧಿಕಾರಿಗಳನ್ನು ತನಿಖೆಗೆ ನಿಯೋಜಿನೆ ಮಾಡಲಾಗುತ್ತದೆ. ಇದನ್ನು ಪೊಲೀಸ್ ಇಲಾಖೆಯೆ ಮಾಡಿಕೊಳ್ಳಲಿದ್ದು, ನಾವ್ಯಾರು ಕೂಡ ಈ ಬಗ್ಗೆ ಸೂಚನೆ ನೀಡಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.