ವಿಜಯಪುರ: ರೇಣುಕಾ ಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ದರ್ಶನ್ ರಕ್ಷಣೆಗೆ ಕಾಂಗ್ರೆಸ್, ಬಿಜೆಪಿ ಶಾಸಕರು ಒತ್ತಡ ವಿಚಾರವಾಗಿ ವಿಜಯಪುರದಲ್ಲಿ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಲೋಕಾಯುಕ್ತದಲ್ಲಿ ದಾಖಲಾದ 22 ದೂರಿನ ಪ್ರಕರಣಗಳಿಗೆ ತೀರ್ಮಾನ – ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ!
ಈ ಸಂಬಂಧ ಮಾತನಾಡಿದ ಅವರು, ಯಾರು ಯಾರನ್ನು ರಕ್ಷಿಸಲು ಸಾಧ್ಯವಿಲ್ಲ.. ನಮ್ಮ ಸಿಎಂ,ಗೃಹ ಸಚಿವರು ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಿಯೇ ಆಗುತ್ತದೆ. ಅದರಲ್ಲಿ ಯಾವುದೂ ಸಂಶಯ ಬೇಡ. ಎಲ್ಲದಕ್ಕೂ ಕಾನೂನಿದೆ, ಯಾವುದು ಮುಚ್ಚಿಹಾಕಲು ಆಗಲ್ಲ. ಮೃತ ಕುಟುಂಬವಿದೆ, ಅವರ ಪರ ವಕೀಲರು ಇರ್ತಾರೆ. ಇದರಲ್ಲಿ ಸರ್ಕಾರ ಮಾತ್ರ ಪಾರದರ್ಶಕವಾಗಿ ತನಿಖೆ ನಡೆಯಲಿದೆ.
ದರ್ಶನ್ ಕೇಸ್ ನಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲ್ಲ.. ಈಗಾಗಲೇ ಪ್ರಕರಣದ ಬಗ್ಗೆ ಸಾಕಷ್ಟು ವಿಚಾರ ಬೆಳಕಿಗೆ ಬರ್ತೀವೆ. ಹೈಪ್ರೋಫೈಲ್ ನವರ ತಪ್ಪು ಮಾಡಿದ್ರೆ ಸುಮ್ಮನೆ ಬಿಡಬೇಕಾ!?..ಹೈ ಪ್ರೋಫೈಲ್ ನವರನ್ನು ಲೋ ಪ್ರೋಫೈಲ್ ಮಾಡಬೇಕಾ!?..ಯಾರಿಗೊಂದು ಕಾನೂನು, ಸಣ್ಣವರಿಗೊಂದು ಎಂ ಬಿ ಪಾಟೀಲ್ ಗೊಂದು ಕಾನೂನು ಬೇರೆ ಇರುತ್ತಾ!? ಕಾನೂನು ಅರಿವು ಇದ್ದವರು ತಪ್ಪು ಮಾಡುವ ವಿಚಾರವಾಗಿ ಮಾತನಾಡಿ, ದಿನನಿತ್ಯ ಇಂತಹ ಕ್ರೈಂ ನಡೆಯುತ್ತಾ ಇರ್ತಾವೆ. ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು,ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರು ಅಂತ ಕೋರ್ಟ್ ತೀರ್ಮಾನ ಮಾಡಿ ಶಿಕ್ಷೆ ಕೊಡುತ್ತೇ..
ತಪ್ಪಿತಸ್ಥರಿಲ್ಲ ಅಂದ್ರೆ ನಿರ್ದೋಷಿ ಅಂತ ಕಳಿಸುತ್ತದೆ. ಇದರಲ್ಲಿ ಏನು ಪ್ರಶ್ನೆ ಬರುತ್ತೆ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.