ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ದರ್ಶನ್ ಅವರು ಜೈಲಿನಲ್ಲಿ ಯಾರೊಂದಿಗೂ ಬೆಳೆಯುತ್ತಿಲ್ಲ ಎನ್ನಲಾಗಿದೆ.
ಕರ್ನಾಟಕಕ್ಕೆ ಟಕ್ಕರ್ ಕೊಟ್ಟ ತಮಿಳುನಾಡು.. ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ BIALಗೆ ಹೊಣೆ!
ನಟ ದರ್ಶನ್ ಜೈಲಿನ ದಿನಚರಿ ನೋಡುವುದಾದರೆ ರಾತ್ರಿ ಬೇಗ ನಿದ್ದೆಗೆ ಜಾರಿದ್ದ ನಟ ದರ್ಶನ್ ಮರುದಿನ ಬೆಳಗ್ಗೆ 6 ಗಂಟೆ ಸುಮಾರಿಗೆ ಎದ್ದು ಬಿಸಿನೀರು ಸೇವಿಸಿದ್ದಾರಂತೆ. ಜೈಲಿನ ಸಿಬ್ಬಂದಿ ನೀಡಿದ ಪಲಾವ್ ತಿಂದಿದ್ದಾರೆ. ಆದರೆ ನಟ ಅಷ್ಟಾಗಿ ಯಾರೊಂದಿಗೂ ಬೆರೆಯುತ್ತಿಲ್ಲ ಎನ್ನಲಾಗಿದೆ.
ನಟ ಪ್ರೇಮ್ ಮತ್ತು ರಕ್ಷಿತಾ ಭೇಟಿ ಬಳಿಕ ದರ್ಶನ್ ಅವರು ಲವಲವಿಕೆಯಿಂದ ಇದ್ದಾರೆ ಎನ್ನಲಾಗಿದೆ. ಆದರೂ ಸ್ಟಾರ್ ನಟನಿಗೆ ಜೈಲಿನ ಸೆರೆವಾಸ ಒಗ್ಗುತ್ತಿಲ್ಲ ಎನ್ನಲಾಗಿದೆ. ನಟ ದರ್ಶನ್ ಅವರು ಮಗ ನೀಡಿದ ಜಾಕೆಟ್ ಧರಿಸಿ ಮಗನ ಬಗ್ಗೆ ದರ್ಶನ್ ಯೋಚನೆ ಮಾಡುತ್ತಿದ್ದರು ಎನ್ನಲಾಗಿದೆ.
ಪತ್ನಿ ಹಾಗೂ ಮಗನ ಭೇಟಿ ಮಾಡಿದ ಬಳಿಕ ಸ್ವಲ್ಪ ರಿಲ್ಯಾಕ್ಸ್ ಆಗಿದ್ದ ದರ್ಶನ್ ಅವರು ಚಿತ್ರರಂಗ ಆತ್ಮೀಯರು ಹಾಗೂ ಇತರೇ ಯಾರನ್ನು ಭೇಟಿ ಮಾಡಲು ನಿರಾಕರಿಸುತ್ತಿದ್ದಾರಂತೆ. ಈ ಹಿನ್ನೆಲೆಯಲ್ಲಿ ಅವರಿಗೆ ಜೈಲಿನಲ್ಲಿ ಸಮಯ ಕಳೆಯಲು ಕಷ್ಟ ಆಗುತ್ತಿದೆಯಂತೆ, ಯಾಕೆ ಈ ರೀತಿ ಮಾಡಿಕೊಂಡು ಬಿಟ್ಟೆಯಂತ ಪಶ್ಚಾತ್ತಾಪ ಪಡ್ತಿದ್ದಾರಂತೆ.
ಇನ್ನು, ಜೈಲಿನಲ್ಲಿರುವ ದರ್ಶನ್ಗೆ ತಲೆಕೂದಲು ಮೆಂಟೈನ್ ಮಾಡೋದೇ ದೊಡ್ಡ ಟೆನ್ಶನ್ ಆಗಿದೆಯಂತೆ. ವಿಗ್ ಮೇಂಟೇನ್ ಮಾಡಲಾಗದೆ ದರ್ಶನ್ ಅವರು ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಪ್ರತಿ ದಿನ ದರ್ಶನ್ ಅವರು ತಮ್ಮ ವಿಗ್ ಅಳತೆಗೆ ತಕ್ಕಂತೆ ಕೂದಲು ಟ್ರಿಮ್ ಮಾಡುತ್ತಿದ್ದರು. ಆದರೆ ಇದೀಗ ಹೇರ್ ಸ್ಟೇಲ್ ಮೆಂಟೈನ್ ಮಾಡಿಕೊಳ್ಳಲಾಗಿದೆ ಸಂಪೂರ್ಣವಾಗಿ ತಲೆ ಕೂದಲನ್ನು ತೆಗೆದಿದ್ದಾರೆ ಎನ್ನಲಾಗಿದೆ.
ದರ್ಶನ್ ಅವರ ಬ್ಯಾರಕ್ ನಲ್ಲಿ ದರ್ಶನ್ ಜೊತೆಗೆ ರೇಣುಕಾಸ್ವಾಮಿ ಪ್ರಕರಣದ ಇತರೇ ಆರೋಪಿಗಳು ಇದ್ದು, ಆದರೆ ಅವರೊಂದಿಗೂ ದರ್ಶನ್ ಮಾತನಾಡುತ್ತಿಲ್ಲವಂತೆ. ನಿಮ್ಮಿಂದಲೇ ನನಗೆ ಹೀಗ್ ಆಯ್ತು ಎಂಬ ಬೇಸರದಲ್ಲಿ ಅವರೊಂದಿಗೂ ಮಾತನಾಡುತ್ತಿಲ್ಲವಂತೆ. ದರ್ಶನ್ ಅವರಿಗೆ ಅಟ್ಯಾಚ್ ಬಾತ್ ರೂಮ್ ಇರೋ ಕೊಠಡಿಯನ್ನು ಮಾತ್ರ ನೀಡಿದ್ದು, ಸಾಮಾನ್ಯ ಕೈದಿಯಂತೆ ಸಮಯ ಕಳೆಯುತ್ತಿದ್ದಾರಂತೆ ಎನ್ನಲಾಗಿದೆ.
ಡಿ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧವಾಗಿ ಇನ್ನೂ ಒಂದು ದಿನ ದರ್ಶನ್ ಹಾಗೂ ತಂಡ ಪೊಲೀಸ್ ಕಸ್ಟಡಿಯಲ್ಲಿರಲಿದೆ. ಮಹಜರು ಪ್ರಕ್ರಿಯೆ ಮುಗಿದ ಬಳಿಕ ದರ್ಶನ್ ಮನಸ್ಥಿತಿಯಲ್ಲಿ ಬದಲಾವಣೆಯಾಗಿದೆ. ಘಟನೆ ಬಗ್ಗೆ ದರ್ಶನ್ ಈಗ ತೀವ್ರ ಪಶ್ಚಾತ್ತಾಪದ ಮಾತುಗಳನ್ನಾಡುತ್ತಿದ್ದಾರಂತೆ.