ಬೆಂಗಳೂರು: ದರ್ಶನ್ & ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಕೇಸ್ ದಿನದಿಂದ ದಿನಕ್ಕೆ ರೋಚಕ ಘಟ್ಟ ತಲುಪುತ್ತಿದ್ದು ದಿನಕ್ಕೊಂದು ಮಾಹಿತಿ ಪೊಲೀಸರು ಕಲೆ ಹಾಕುತ್ತಿದ್ದಾರೆ. ಈಗ ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಮೂವರಿಗೆ ಪೊಲೀಸರು ನೋಟಿಸ್ ನೀಡಿದ್ದು ವಿಚಾರಣೆಗೆ ಹಾಜರಾಗುವಂತೆ ಆದೇಶ ಮಾಡಿದ್ದಾರೆ.
ಮಾಜಿ ಉಪಮೇಯರ್ ಮೋಹನ್ ರಾಜ್ ಅವರಿಗೆ ಬಸವೇಶ್ವರನಗರ ಪೊಲೀಸ್ ಠಾಣೆಗೆ ಖುದ್ದು ಹಾಜರಾಗುವಂತೆ ನೋಟಿಸ್ ನೀಡಿದ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಜು.17ರವರೆಗೆ ದರ್ಶನ್ ನ್ಯಾಯಾಂಗ ಬಂಧನ ವಿಸ್ತರಣೆ: ಬರೋಬ್ಬರಿ 15 ಕಾರಣ ನೀಡಿದ ವಕೀಲರು
ದರ್ಶನ್ ಗೆ 40 ಲಕ್ಷ ಹಣ ನೀಡಿದ್ದ ಮೋಹನ್ ರಾಜ್ ಪೊಲೀಸ್ ವಿಚಾರಣೆ ವೇಳೆ ಮೋಹನ್ ರಾಜ್ ರಿಂದ ದರ್ಶನ್ 40 ಲಕ್ಷ ಹಣ ಪಡೆದಿದ್ದ ಬಗ್ಗೆ ಹೇಳಿದ್ದ ದರ್ಶನ್ ಯಾವ ಉದ್ದೇಶಕ್ಕಾಗಿ ನಟ ದರ್ಶನ್ ಗೆ ಹಣ ನೀಡಿದ್ದಾರೆಂದು ತಿಳಿಸಲು ಪೊಲೀಸ್ ನೋಟಿಸ್ ಪ್ರಕರಣ ಸಂಬಂಧ ಪವಿತ್ರಾಗೌಡ ಸ್ನೇಹಿತೆ ಸಮತ ಗೂ ನೋಟಿಸ್ ಜಾರಿ ಮಾಡಲಾಗಿದೆ.ಪ್ರಕರಣದ ಆರೋಪಿ ಒಬ್ಬನಿಗೆ ಹಣಕಾಸಿನ ಸಹಾಯ ಮಾಡಿರೋ ಆರೋಪವಾಗಿದೆ.
ಹಾಗೆ ಬೆಂಗಳೂರಿನ ಪ್ರಭಾವಿ ಶಾಸಕನ ಕಾರು ಚಾಲಕನಿಗೂ ನೋಟಿಸ್ ನೀಡಿದ್ದು ಕಾರ್ತಿಕ್ ಪುರೋಹಿತ್ ಎಂಬ ಕಾರು ಚಾಲಕನಿಗೆ ನೋಟಿಸ್ ರೇಣುಕಾಸ್ವಾಮಿ ಹತ್ಯೆ ಕೇಸ್ ಆರೋಪಿ ಪ್ರದೋಷ್ ಗೆ ಆಪ್ತನಾಗಿರೋ ಕಾರ್ತಿಕ್ ಪುರೋಹಿತ್ ಪ್ರಕರಣದ ಸಂಬಂಧ ನೋಟಿಸ್ ತಲುಪಿದ ಸಂಬಂಧ ಕಾರ್ತಿಕ್ ಪುರೋಹಿತ್ ಎಸ್ಕೇಪ್ ಆಗಿದ್ದಾನೆ.ಈಗ ಅವನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.