ಕಲಬುರಗಿಯಲ್ಲೂ ಆರಂಭವಾಯ್ತಾ ದೇಗುಲ ದಂಗಲ್..ಹೌದು ನಗರದ ಬಹಮನಿ ಕೋಟೆಯೊಳಗೆ ಪತ್ತೆಯಾಗಿರುವ ಸ್ವಯಂಭೋ ಸೋಮೇಶ್ವರ ದೇಗುಲ ಜಿರ್ಣೊದ್ಧಾರಕ್ಕೆ ಹಿಂದೂ ಜಾಗೃತಿ ಸೇನೆ ಆಗ್ರಹ ಮಾಡಿದೆ..ಈ ಕುರಿತು ಇವತ್ತು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ ಸೇನೆ ಕಾರ್ಯಕರ್ತರು
ಸೋಮೇಶ್ವರ ದೇಗುಲ ಜೀರ್ಣೋದ್ಧಾರ ಜೊತೆ ಹೊಸ ಲಿಂಗ ಪ್ರತಿಷ್ಠಾಪನೆಗೆ ಅನುಮತಿ ನೀಡಲು ಆಗ್ರಹಿಸಿದ್ದಾರೆ.
ಶಿವರಾತ್ರಿಯೊಳಗೆ ಲಿಂಗ ಪ್ರತಿಷ್ಠಾಪಿಸಿ ಪೂಜೆ ಮಾಡಲು ಅವಕಾಶಕ್ಕೆ ನೀಡುವಂತೆ ಸರ್ಕಾರಕ್ಕೆ ಡೆಡ್ಲೈನ್ ಕೊಟ್ಟಿದ್ದಾರೆ.. ಮಾತ್ರವಲ್ಲ ಜಿಲ್ಲಾಡಳಿತ ಅನುಮತಿ ನೀಡದಿದ್ದರೆ ಸ್ವಯಂಪ್ರೇರಿತವಾಗಿ ನಾವೇ ಪೂಜೆ ಮಾಡುತ್ತೇವೆ ಅಂತ ಎಚ್ಚರಿಕೆ ಕೊಟ್ಟಿದ್ದಾರೆ.