ಗದಗ: ಕೆ.ಎಸ್.ಈಶ್ವರಪ್ಪ ಹೇಳಿಕೆ ವಿಚಾರವಾಗಿ ಗದಗನಲ್ಲಿ ಸಚಿವ ಎಚ್ ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಅವರಿಗೆ ಒಂದು ಸಲಹೆ ಮಾಡಿದೆ. ಪ್ರಜಾಪ್ರಭುತ್ವದಲ್ಲಿ ಗುಂಡಿಕ್ಕಿ ಕೊಲ್ಲಿರಿ, ಕೊಡ್ಲೀಲೆ ಹೊಡೀರಿ, ಕುಡುಗೋಲು ತಗೋಳಿ ಎಲ್ಲಾ ಈಶ್ವರಪ್ಪರಂತ ಎತ್ತರದ ವ್ಯಕ್ತಿಗಳಿಗೆ, ಅನುಭವಸ್ತ ವ್ಯಕ್ತಿಗಳಿಗೆ ಸೂಕ್ತವಾಗಿರೋದಲ್ಲ, ಶೋಭೆ ತರೋದಿಲ್ಲ.
ಪ್ರಜಾಪ್ರಭುತ್ವ ಇಂತಹ ಮಾತುಗಳಿಂದ ಅಶಕ್ತಗೊಳ್ಳುತ್ತದೆ. ಅದನ್ನ ಮಾಡಬೇಡಿ ಅಂತ ವಿನಂತಿ ಮಾಡಿದೆ. ಮಿತೃತ್ವವನ್ನ ಬಳಸಿಕೊಂಡು 24 ತಾಸಿನಲ್ಲಿ ಅವರು ವಾಪಸ್ ಪಡೀಬೇಕು ಅಂತಾ ಅವರಿಗೆ ಸಲಹೆ ಮಾಡಿದ್ದೆ. ಕಾನೂನು ಕ್ರಮ ಕೈಗೊಳ್ಳಲಿ ಅಂತಾ ಅವರು ಪ್ರತಿಕ್ರಿಯೆ ಮಾಡಿದ್ದಾರೆ, ಅದನ್ನ ಸಂಬಂಧಪಟ್ಟವರು ಗಮನಿಸ್ತಾರೆ ಎಂದು ಹೇಳಿದರು.