ವಿಜಯಪುರ: ಕೆಲ ದಿನಗಳ ಹಿಂದೆ ಸುರಿದ ಬಾರಿ ಮಳೆಯಿಂದ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಡೋಣಿ ನದಿ ಅಂಚಿನಲ್ಲಿ ಹಳೆಯ ನೆಲ ಸೇತುವೆ ಜಲಾವೃತ ಉಂಟಾಗಿತ್ತು. ಮಳೆ ನಿಂತ ಬಳಿಕವು ಪ್ರವಾಹ ಹೆಚ್ಚುತ್ತಲೆ ಇತ್ತು. ಈಗ ಡೋಣಿ ನದಿ ಪ್ರವಾಹ ಕೊಂಚ-ಕೊಂಚವಾಗಿಯೇ ಇಳಿಕೆಯಾಗ್ತಿದೆ. ಆತಂಕದಲ್ಲಿದ್ದ ದೋಣಿ ನದಿ ತೀರದ ಜನ ನಿರಾತಂಕ ಗೊಂಡಿದ್ದಾರೆ.. ಕೆಲ ದಿನಗಳಿಂದ ಸುರಿದ ಮಳೆಯಿಂದ ಡೋಣಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು. ಡೋಣಿ ನದಿಗೆ ಕಟ್ಟಿರೋ ಹಳೆಯ ನೆಲ ಸೇತುವೆ ಜಲಾವೃತವಾಗಿತ್ತು.
ಜಲಾವೃತವಾದ ಹಳೆಯ ಸೇತುವೆಯ ಮೇಲೆಯೇ ವಾಹನಗಳ ಸಂಚಾರವಾಗುತ್ತಿದ್ದು, ಹೊಸ ಸೇತುವೆ ಕಳಪೆ ಕಾಮಗಾರಿಯಿಂದ ಶಿಥಿಲಗೊಂಡಿದೆ. ಹೊಸ ಸೇತುವೆ ಅಲ್ಲಲ್ಲಿ ಬಿರುಕು ಬಿಟ್ಟು ಬೀಳೊ ಹಂತ ತಲುಪಿದೆ. ಹಾಗಾಗಿ ಹೊಸ ಸೇತುವೆ ಮೇಲೆ ಕಳೆದ ಎರಡು ವರ್ಷಗಳಿಂದ ಸಂಚಾರ ನಿಷೇಧಿಸಲಾಗಿದೆ. ವಿಜಯಪುರ ತಾಳಿಕೋಟೆ ಹಾಗೂ ಯಾದಗಿರಿ ಸಂಪರ್ಕಿಸೋ ಮನಗೂಳಿ ದೇವಾಪೂರ ಬಿಜ್ಜಳ ರಾಜ್ಯ ಹೆದ್ದಾರಿ 61ಯಲ್ಲಿ ಗುಣಮಟ್ಟದ ಹೊಸ ಸೇತುವೆ ನಿರ್ಮಾಣ ಮಾಡಲು ಒತ್ತಾಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.