ಹುಬ್ಬಳ್ಳಿ; ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನ ಸಭೆಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಒಳ ಹೊಂದಾಣಿಕೆ ಮೂಲಕ ರಾಜಕಾರಣ ಮಾಡಲಾಗುತ್ತಿದೆ ಎಂದು ಶಿಗ್ಗಾಂವಿ ವಿಧಾನ ಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿರಾಜು ಅನಂತ ಸಾ ನಾಯಕವಾಡಿ ಗಂಭೀರ ಸ್ವರೂಪದ ಆರೋಪ ಮಾಡಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ಕಾಂಗ್ರೆಸ್ ಹಾಗೂ ಬಿಜೆಪಿ ರಾಷ್ಟ್ರೀಯ ಪಕ್ಷಕ್ಕೆ ಜನಸಾಮಾನ್ಯರ ಸಮಸ್ಯೆ ಅರ್ಥ ಆಗತಾ ಇಲ್ಲ ಅವರಿಗೆ ಯಾವುದೇ ಅಭಿವೃದ್ಧಿ ಕಾರ್ಯ ಬೇಡವಾಗಿದೆ.
ಯುವಕರಿಗೆ, ಬಡವರು ಏನು ಸಮಸ್ಯೆ ಎದುರುಸುತ್ತಾ ಇದ್ದಾರೆ ಅನ್ನುವುದರ ಬಗ್ಗೆ ಗಮನ ಹರಿಸತಾ ಇಲ್ಲ ಕೇವಲ ಅಧಿಕಾರಕ್ಕಾಗಿ ಮಾತ್ರ ಅವರು ರಾಜಕಾರಣ ಮಾಡತಾ ಇದ್ದಾರೆ. ಚುನಾವಣೆಗೆ ಎದುರುಸುವುದು ಅಧಿಕಾರ ಪಡೆಯುವುದು ಮಾತ್ರ ಇವರ ಕೆಲಸ ಆಗಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ ಅಪರಾಧ ಹಿನ್ನಲೆವುಳ್ಳವರುಇವರ ಹಿನ್ನಲೆ ಕಾಂಗ್ರೆಸ್ ನಾಯಕರಿಗೆ ಗೊತ್ತಾಗಲಿಲ್ವಾ ಜನರ ಸೇವೆ ಮಾಡಲಿಕ್ಕೆ ಇವರು ಯೋಗ್ಯರಾ ಎಂಬ ಪ್ರಶ್ನೆ ಕಾಡತಾ ಇದೆ. ಇನ್ನುಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪುತ್ರ ಅನ್ನು ಕಾರಣಕ್ಕೆ ಟಿಕೆಟ್ ಕೊಡಲಾಗಿದ್ದು,
ATMನಲ್ಲಿ ಹರಿದ ನೋಟುಗಳು ಬಂದ್ರೆ ಏನ್ ಮಾಡ್ಬೇಕು.? RBI ನಿಯಮಗಳೇನು ಗೊತ್ತಾ..?
ಭರತ್ ಬೊಮ್ಮಾಯಿ ಮೂಲತಃ ಉದ್ಯಮಿ ಆಗಿದ್ದಾರೆ. ಅವರಿಗೆ ಯಾವುದೇ ರೀತಿಯ ಜನರ ಬಗ್ಗೆ ಅವರಿಗೆ ಗೊತ್ತು ಇಲ್ಲ.ರೈತರ ಸಮಸ್ಯೆ ಕುರಿತು ಏನು ಗೊತ್ತು ಶಿಗ್ಗಾಂವಿ ವಿಧಾನ ಸಭಾ ಕ್ಷೇತ್ರದ ಬಗ್ಗೆ ಏನು ಮಾಹಿತಿ ಇದೆ ಏನು ಇಲ್ಲ ಜನರ ಬಗ್ಗೆ ಯಾವುದೇ ಕಾಳಜಿ ಇಲ್ಲ ಜನರ ಸಮಸ್ಯೆ ಅರಿತು ಅಭಿವೃದ್ಧಿ ಕಾರ್ಯ ಮಾಡುವ ಅಭ್ಯರ್ಥಿ ಬೇಕು ಆದ್ದರಿಂದ ಎರಡು ಪಕ್ಷದ ನಾಯಕರು ಜನರನ್ನ ಹಣ ಕೊಟ್ಟು ಪ್ರಚಾರಕ್ಕೆ ಕರೆಸಿಕೊಳ್ಳತಾ ಇದ್ದಾರೆ. ಬರುವ ಜನರು ನೋಡಿದರೆ ಅಭಿಮಾನದಿಂದ ಬಂದ ಜನರು ಅಲ್ಲಕಾಂಗ್ರೆಸ್ ಬಿಜೆಪಿ ಹೊಂದಾಣಿಕೆ ರಾಜಕಾರಣ ಮಾಡತಾ ಇದ್ದಾರೆ.
ಲಿಂಗಾಯತ ಸಮಾಜದಲ್ಲಿನ ಮತ ವಿಭಜನೆ ಆಗುತ್ತಿವೆ ಅನ್ನುವ ಕಾರಣಕ್ಕೆ ಭಾರತೀಯ ಜನತಾ ಪಕ್ಷದವರು ಮಾಜಿ ಸಚಿವ ,ಶಾಸಕ ವಿನಯ ಕುಲಕರ್ಣಿ ಪುತ್ರಿ ಟಿಕೆಟ್ ಕೊಡಸಲಿಲ್ಲ, ಇಲ್ಲಿ ಬಿಜೆಪಿಗೆ ಬಹಳ ಟಪ್ ಆಗುತ್ತದೆ ಅನ್ನುವ ಕಾರಣಕ್ಕೆ ವಿನಯ ಕುಲಕರ್ಣಿ ಪುತ್ರಿಗೆ ಟಿಕೆಟ್ ಕೊಡಲಿಲ್ಲ. ಈಗ ನೋಡಿದರೆಕಾಂಗ್ರೆಸ್ ಡಮ್ಮಿ ಅಭ್ಯರ್ಥಿ ಹಾಕಿದ್ದುಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಮೇಲೆ ಗುರುತರ ಆರೋಪ ಇದೆ ಎಂದರು. ನಾನು ಯಾವುದೇ ರೀತಿಯ ಹೊಂದಾಣಿಕೆ ರಾಜಕಾರಣ ಮಾಡಿದವನಲ್ಲಈ ಹಿಂದೆ ಇದೇ ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿದ್ದೆ,
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಸಹ ಆಗಿದ್ದೆ, ಯಾವುದೇ ಆಶೆ ಆಮಿಷಗಳಿಗೆ ಒಳಾಗಲಿಲ್ಲಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ನಾಯಕರಿಂದ ಕೋಟ್ಯಾಂತರ ಆಮಿಷ್ ಬಂದಿತುಯಾವುದೇ ಕಾರಣಕ್ಕೋ ಹಣದ ಹಿಂದೆ ಹೋಗಲಿಲ್ಲ, ಆದರೆ ಈಗ ಪ್ರಾಮಾಣಿಕವಾಗಿ ಚುನಾವಣೆ ಎದುರುಸಿದ್ದವನು ಈಗಲೂ ಸಹ ಶಿಗ್ಗಾಂವಿ ಚುನಾವಣೆಯಲ್ಲಿ ಜನರ ನಡುವೆ ಇದ್ದು ರಾಜಕಾರಣ ಮಾಡುವೆ ನನಗೆ ಹಣ ಬೆಂಬಲ ಬದಲು ಜನ ಬೆಂಬಲ ಇದೆ ಎಂದರು.