ಬೆಳಗಾವಿ : ಬೆಳಗಾವಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕಿಡ್ನ್ಯಾಪ್ ಮಾಡಿರುವ ಘಟನೆ ನಡೆದಿದೆ. ಕಳೆದ ಫೆ.14ರಂದು ಗೋಕಾಕ್ ತಾಲೂಕಿನ ದಂಡಾಪುರ ಕ್ರಾಸ್ ನಲ್ಲಿ ಉದ್ಯಮಿ ಅಪಹರಣ ನಡೆದಿದೆ.
ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ನಿವಾಸಿ ಬಸವರಾಜ್ ಕಿಡ್ನ್ಯಾಪ್ ಆಗಿದ್ದು, ಬಸವರಾಜ್ ಬಾಗಲಕೋಟೆ ಜಿಲ್ಲೆಯ ಜಮಖಂಡಿ, ತೇರದಾಳದಲ್ಲಿ ರಿಯಲ್ ಎಸ್ಟೇಟ್ ನಡೆಸುತ್ತಿದ್ದರು. ಫೆ.14ರಂದು ಕಾರಿನಲ್ಲಿ ಬಂದಿದ್ದ ಆರೋಪಿಗಳು ಬಸವರಾಜ್ ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ್ ತಳವಾರ ಕಿಡ್ನ್ಯಾಪ್ ಮಾಡಿದ್ದು, 5 ಕೋಟಿಗೆ ಬೇಡಿಕೆ ಇಟ್ಟದ್ದಾರೆ. ಬಸವರಾಜ್ ಪತ್ನಿ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಿಡ್ನ್ಯಾಪ್ ಮಾಡಿದ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕಿಡ್ನ್ಯಾಪ್ ಮಾಡಿ ಬಸವರಾಜ್ ಮೊಬೈಲ್ ನಿಂದ ಪತ್ನಿಗೆ ಕರೆ ಮಾಡಿ ಹಣ ತರುವಂತೆ ಡಿಮಾಂಡ್ ಮಾಡಿದ್ದಾರೆ. ನಿಪ್ಪಾಣಿ ತಾಲೂಕಿನ ಬಳಿಕ ಹಣ ತೆಗೆದುಕೊಂಡು ಬರಲು ಡಿಮ್ಯಾಂಡ್ ಮಾಡಿದ್ದು, ಬಸವರಾಜ್ ಅವರ ಮಗ ಕೆಲವರನ್ನ ಕರೆದುಕೊಂಡು ಹಣ ತೆಗೆದುಕೊಂಡು ಹೋಗಿದ್ದಾಗ.
ಏಕಾಂಗಿ ಆಗಿ ಬರಲು ಹೇಳಿದ್ರು ಜನರನ್ನ ಕರೆದುಕೊಂಡು ಬಂದಿದ್ದಕ್ಕೆ ಅಲ್ಲಿಂದ ಬಸವರಾಜ್ ಕರೆದುಕೊಂಡು ಎಸ್ಕೇಪ್ ಆಗಿದ್ದು, ಆ ಬಳಿಕ ಮತ್ತೆ ಕರೆ ಮಾಡಿ ಒಬ್ಬನೇ ಬರಬೇಕು ಇಲ್ಲವೇ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.