RCB ಟ್ರೋಫಿ ಗೆಲ್ಲಲು ಸಾಧ್ಯವೇ ಇಲ್ಲವೆಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಟೀಕಿಸಿದ್ದಾರೆ.
ಆರ್ಸಿಬಿಯಂತಹ ತಂಡವು ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ ಎಂದು ಟೀಕಿಸಲು ರಾಯುಡು ಬಲವಾದ ಕಾರಣ ನೀಡಿದ್ದಾರೆ. ಆ ತಂಡದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನ ಎಲ್ಲಾ ಅಗ್ರ ಆಟಗಾರರು ಅಗ್ರಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ ವಿಫಲರಾಗುತ್ತಿದ್ದಾರೆ. ಇದರೊಂದಿಗೆ ಕೆಳ ಮಧ್ಯಮ ಕ್ರಮಾಂಕದಲ್ಲಿ ಬರುವ ಅನುಜ್ ರಾವತ್, ದಿನೇಶ್ ಕಾರ್ತಿಕ್ ಮತ್ತು ಮಹಿಪಾಲ್ ಲೊಮ್ರೋರ್ ಅವರಂತಹವರ ಮೇಲೆ ಹೊರೆ ಬೀಳುತ್ತದೆ. ಹೀಗಾದರೆ ಟ್ರೋಫಿ ಗೆಲ್ಲುವುದು ಹೇಗೆ ಎಂದು ರಾಯುಡು ಪ್ರಶ್ನಿಸಿದ್ದಾರೆ.
ಚುನಾವಣಾ ಕಣದಿಂದ ಹಿಂದೆ ಸರಿದಿರುವ ಸುಮಲತಾ ನಿರ್ಧಾರ ಸ್ವಾಗತಾರ್ಹ: ಕುಮಾರಸ್ವಾಮಿ
16 ವರ್ಷಗಳಿಂದ ಇದೇ ನಡೆಯುತ್ತಿದೆ ಎಂದ ರಾಯುಡು
ಆರ್ಸಿಬಿ ತಂಡವನ್ನು ಒಮ್ಮೆ ಗಮನಿಸಿ ನೋಡಿ. ಒತ್ತಡ ಹೆಚ್ಚಾದಾಗ, ಆ ಒತ್ತಡವನ್ನು ನಿಭಾಯಿಸಬಲ್ಲ ಆಟಗಾರರೇ ಇಲ್ಲ. ದಿನೇಶ್ ಕಾರ್ತಿಕ್ ಮತ್ತು ಭಾರತದ ಯುವ ಬ್ಯಾಟ್ಸ್ಮನ್ಗಳು ಮಾತ್ರ ಕೊನೆಯಲ್ಲಿ ಆಡುತ್ತಿದ್ದಾರೆ. ತಂಡದ ದೊಡ್ಡ ಆಟಗಾರರು, ಒತ್ತಡ ನಿಭಾಯಿಸಬಲ್ಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಎಲ್ಲಿದ್ದಾರೆ? ಅವರೆಲ್ಲರೂ ಔಟಾಗಿ ಡ್ರೆಸ್ಸಿಂಗ್ ರೂಮ್ನಲ್ಲಿ ಕುಳಿತಿರುತ್ತಾರೆ. ಕಳೆದ 16 ವರ್ಷಗಳಿಂದ ಇದೇ ನಡೆಯುತ್ತಿದೆ ಎಂದು ರಾಯುಡು ಹೇಳಿದ್ದಾರೆ.
ಈ ಹಿಂದೆ ಗೇಲ್, ಕೊಹ್ಲಿ, ಡಿವಿಲಿಯರ್ಸ್ ಇದ್ದಾಗಲೂ ಸಹ ಬ್ಯಾಟಿಂಗ್ ಕ್ರಮಾಂಕದಲ್ಲಿ ಅವರು ಅಗ್ರಸ್ಥಾನದಲ್ಲೇ ಬರುತ್ತಿದ್ದನ್ನು ಪ್ರಸ್ತಾಪಿಸಿದ ರಾಯುಡು, ಆರ್ಸಿಬಿ ಕಥೆ ಯಾವಾಗಲೂ ಒಂದೇ ಆಗಿರುತ್ತದೆ. ಒತ್ತಡದಲ್ಲಿ ಅವರ ತಂಡದಲ್ಲಿ ಒಬ್ಬ ದೊಡ್ಡ ಆಟಗಾರ ಕಾಣಿಸಲ್ಲ. ಎಲ್ಲ ದೊಡ್ಡ ಆಟಗಾರರು ಅಗ್ರಸ್ಥಾನದಲ್ಲಿ ಕಾಣಿಸಿಕೊಂಡರೆ, ಯುವ ಆಟಗಾರರು ಕೆಳ ಕ್ರಮಾಂಕದಲ್ಲಿ ಬರುತ್ತಿದ್ದಾರೆ. ಇದೇ ಕಾರಣಕ್ಕೆ ಐಪಿಎಲ್ ಗೆಲ್ಲಲು ಹಲವು ವರ್ಷಗಳಿಂದ ಸಾಧ್ಯವಾಗುತ್ತಿಲ್ಲ. ಈ ವಿಧಾನ ಬದಲಿಸಿದ್ದರೆ, ಮುಂದೆಯೂ ಗೆಲ್ಲುವುದಿಲ್ಲ ಎಂದಿದ್ದಾರೆ.
ಆರ್ಸಿಬಿ ಮಹಿಳಾ ತಂಡವು ಈ ವರ್ಷ ಡಬ್ಲ್ಯುಪಿಎಲ್ ಗೆದ್ದ ಕಾರಣ ಈ ಬಾರಿ, ಪುರುಷರ ತಂಡವು ಅದ್ಭುತ ಸೃಷ್ಟಿಸುತ್ತದೆ ಎಂಬ ಭರವಸೆ ಇತ್ತು. ಆದರೆ, ಮೊದಲ ನಾಲ್ಕು ಪಂದ್ಯಗಳಲ್ಲೇ ಭರವಸೆ ಕಳೆದುಕೊಂಡಿದೆ. ಆರ್ಸಿಬಿ ವಿಶೇಷವಾಗಿ ತನ್ನ ತವರು ಮೈದಾನದ ಚಿನ್ನಸ್ವಾಮಿಯಲ್ಲೇ ಅತ್ಯಂತ ಕೆಟ್ಟ ದಾಖಲೆ ಬರೆದಿದೆ. ಈ ಕ್ರೀಡಾಂಗಣದಲ್ಲಿ ಆರ್ಸಿಬಿ ಗೆಲುವಿನ ಶೇಕಡವಾರು 46.51 ಮಾತ್ರ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ದಾಖಲೆ ಗಮನಿಸಿದರೆ, ಅವರದೇ ನೆಲವಾದ ಚೆಪಾಕ್ನಲ್ಲಿ ಶೇಕಡಾ 70.96ರಷ್ಟು ಜಯದ ಪ್ರಮಾಣ ಹೊಂದಿದೆ.