ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಟಾಸ್ ಪ್ರಕ್ರಿಯೆ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಆರ್ಸಿಬಿ ಹಾಗೂ ಕ್ರಿಕೆಟ್ ಅಭಿಮಾನಿಗಳು ಮ್ಯಾಚ್ ರೆಫರಿ ಮತ್ತು ಭಾರತದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಟಾಸ್ನ ಫಲಿತಾಂಶವನ್ನು ಬದಲಾಯಿಸಿದರು, ಮುಂಬೈ ಇಂಡಿಯನ್ಸ್ಗೆ ತಮ್ಮ ಒಲವು ತೋರಿದರು ಎಂದು ಆರೋಪಿಸುತ್ತಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ನೆಟ್ಟಿಗರು ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ನಾಣ್ಯವನ್ನು ತೆಗೆದುಕೊಳ್ಳುವಾಗ ಬದಿಗಳನ್ನು ತಿರುಗಿಸುವ ಮೂಲಕ ಅದನ್ನು ತಿರುಚಿದ್ದಾರೆ ಎಂದು ಹೇಳುತ್ತಿದ್ದಾರೆ.
ಆದರೆ, ಮತ್ತೊಂದು ಬಳಕೆದಾರರಿಂದ ರಿಯಾಲಿಟಿ ಚೆಕ್ ಅನ್ನು ಪಡೆದಾಗ ಜಾವಗಲ್ ಶ್ರೀನಾಥ್ ಟಾಸ್ ನಂತರ ನಾಣ್ಯವನ್ನು ಸರಿಯಾದ ರೀತಿಯಲ್ಲಿ ಎತ್ತಿದ್ದಾರೆ ಎಂದು ಹೆಚ್ಚು ಸ್ಪಷ್ಟವಾದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಜಾವಗಲ್ ಶ್ರೀನಾಥ್ ನಾಣ್ಯದ ಬದಿಗಳನ್ನು ತಿರುಗಿಸಲಿಲ್ಲ, ಬದಲಿಗೆ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಮಾಡಿದ ಕರೆಯನ್ನು ಮರೆತಿದ್ದಾರೆ ಎಂದು ವಿಡಿಯೋದಲ್ಲಿ ತೋರಿಸಲಾಗಿದೆ.
ಮುಂಬೈ ಇಂಡಿಯನ್ಸ್ ಫ್ಯಾನ್ಸ್ಖಾತೆಯಲ್ಲಿ, “ಟಾಸ್ನ ಸ್ಪಷ್ಟ ವಿಡಿಯೋ ಇಲ್ಲಿದೆ… ನಿಮಗೆ ಇನ್ನೂ ಅನುಮಾನವಿದ್ದರೆ ಕಣ್ಣಿನ ಆಸ್ಪತ್ರೆ ಅಥವಾ ಮಾನಸಿಕ ಆಸ್ಪತ್ರೆಗೆ ಹೋಗಿ,” ಎಂದು ವಿಡಿಯೋದಲ್ಲಿದಲ್ಲಿ ಬರೆದುಕೊಂಡಿದ್ದಾರೆ.