RCB ಹಾಗೂ ಪಂಜಾಬ್ ಪಂದ್ಯಕ್ಕೆ ಇದೀಗ ಮಳೆ ಅಡ್ಡಿಯಾಗಿದ್ದು, ಧರ್ಮಶಾಲಾದಲ್ಲಿ ಆಲಿಕಲ್ಲು ಮಳೆ ಆರಂಭವಾಗಿದೆ. ಇದರಿಂದಾಗಿ ಪಂದ್ಯವನ್ನು ಸದ್ಯ ಸ್ಥಗಿತಗೊಳಿಸಲಾಗಿದೆ.
ಹೆಚ್ ಡಿ ಕುಮಾರಸ್ವಾಮಿ ಹಾಗೂ ದೇವರಾಜೇಗೌಡ ವಿರುದ್ಧ SIT ಗೆ ದೂರು ನೀಡಿದ ಕಾಂಗ್ರೆಸ್.. !
ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪ್ಲೇಆಫ್ ಹಂತಕ್ಕಾಗಿ ಭರ್ಜರಿ ಪೈಫೋಟಿ ನಡೆಯುತ್ತಿದೆ. ಈಗಾಗಲೇ ಟಾಸ್ ಆಗಿದ್ದು, ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಸ್ಯಾಮ್ ಕರನ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಇದರ ಭಾಗವಾಗಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಭರ್ಜರಿ ಆರಂಭವನ್ನೇ ಪಡೆದುಕೊಂಡಿದೆ. ಆದರೆ ಪಂದ್ಯಕ್ಕೆ ಇದೀಗ ಮಳೆ ಅಡ್ಡಿಯಾಗಿದ್ದು, ಧರ್ಮಶಾಲಾದಲ್ಲಿ ಆಲಿಕಲ್ಲು ಮಳೆ ಆರಂಭವಾಗಿದೆ. ಇದರಿಂದಾಗಿ ಪಂದ್ಯವನ್ನು ಸದ್ಯ ಸ್ಥಗಿತಗೊಳಿಸಲಾಗಿದೆ.
ಮಳೆಯ ಅಡಚಣೆಗೂ ಮುನ್ನ ಆರ್ಸಿಬಿ ತಂಡವು 10 ಓವರ್ಗೆ 3 ವಿಕೆಟ್ ಕಳೆದುಕೊಂಡು 119 ರನ್ ಸಿಡಿಸಿದೆ. ಆರ್ಸಿಬಿ ಪರ ನಾಯಕ ಫಾಫ್ ಡುಪ್ಲೇಸಿಸ್ 9 ರನ್, ವಿಲ್ ಜ್ಯಾಕ್ಸ್ 12 ರನ್ ಹಾಗೂ ಭರ್ಜರಿ ಬ್ಯಾಟಿಂಗ್ ಮಾಡಿದ ರಜತ್ ಪಾಟಿದಾರ್ 23 ಎಸೆತದಲ್ಲಿ 6 ಸಿಕ್ಸ್ 3 ಫೋರ್ ಮೂಲಕ 55 ರನ್ ಸಿಡಿಸಿ ಮಿಂಚಿದರು.
ಸದ್ಯ ವಿರಾಟ್ ಕೊಹ್ಲಿ 42 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ. ಹಾಗಿದ್ದರೆ ಇದೀಗ ಮಳೆಯಿಂದ ಪಂದ್ಯ ಸಂಪೂರ್ಣ ಪಂದ್ಯ ರದ್ದಾದರೆ ಆರ್ಸಿಬಿ ಪ್ಲೇಆಫ್ ಕಥೆ ಏನ ಆಗಲಿದೆ ಎಂಬ ವಿಚಾರ ಆರಂಭವಾಗಿದೆ. ಒಂದು ವೇಳೆ ಪಂದ್ಯ ಸಂಪೂರ್ಣವಾಗಿ ರದ್ದಾರೆ ಉಭಯ ತಂಡಗಳಿಗೆ ತಲಾ 1-1 ಅಂಕ ನೀಡಲಾಗುತ್ತದೆ.
ಹೀಗಾದರೆ ಆರ್ಸಿಬಿ ತಂಡ 9 ಅಂಕ ಪಡೆಯಲಿದೆ. ಅಲ್ಲದೇ ಮುಂದಿನ 2 ಪಂದ್ಯ ಗೆದ್ದರೂ ಸಹ 13 ಅಂಕ ಆಗಲಿದೆ. ಹೀಗಾಗಿ ಇಂದಿನ ಪಂದ್ಯ ಸೋತರೆ ಆರ್ಸಿಬಿ ನೇರವಾಗಿ ಪ್ಲೇಆಫ್ನಿಂದ ಹೊರಬೀಳಲಿದೆ. ಅಲ್ಲದೇ ಇದೀಲ್ಲವಾದ್ದಲ್ಲಿ ಒಂದು ವೇಳೆ ಓವರ್ ಕಡಿತವಾಗುವ ಸಾಧ್ಯತೆ ಇದೆ.
ಆರ್ಸಿಬಿ ಸದ್ಯ ಆಡಿರುವ 11 ಪಂದ್ಯದಲ್ಲಿ 4ರಲ್ಲಿ ಗೆದ್ದು 7ರಲ್ಲಿ ಸೋತಿದ್ದು, 8 ಅಂಕದೊಂದಿಗೆ 7ನೇ ಸ್ಥಾನದಲ್ಲಿದೆ. ಅದೇ ರೀತಿ ಪಂಜಾಬ್ ಕಿಂಗ್ಸ್ ಸಹ ಆಡಿರುವ 11 ಪಂದ್ಯದಲ್ಲಿ 4ರಲ್ಲಿ ಗೆದ್ದು 7ರಲ್ಲಿ ಸೋತಿದ್ದು, 8 ಅಂಕದೊಂದಿಗೆ 8ನೇ ಸ್ಥಾನದಲ್ಲಿದೆ. ಹೀಗಾಗಿ ಈ ಎರಡೂ ತಂಡಕ್ಕೆ ಇಂದಿನ ಗೆಲುವು ಬಹುಮುಖ್ಯವಾಗಿದೆ.