ಬೆಂಗಳೂರು: ಬೆಂಗಳೂರಿನ ಹೊರವಲಯದಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಪೊಲೀಸರ ನಡೆಯ ಮೇಲೆ ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿದ್ದು, ಪ್ರಕರಣ ಸಂಬಂಧ ಮೂವರ ತಲೆದಂಡವಾಗಿದೆ. ಈ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ಯೆಸ್ ನಗರದ ಹೊರವಲಯದಲ್ಲಿ ರೇವ್ ಪಾರ್ಟಿ ಪ್ರಕರಣ ತನಿಖೆ ಚುರುಕುಗೊಂಡಿದೆ. ಎರಡು ದಿನ ಎಗ್ಗಿಲ್ಲದೆ ನಡೆದ ಪಾರ್ಟಿ ವಿಡಿಯೋಗಳು ಸಹ ವೈರಲ್ ಆಗುತ್ತಿವೆ. ಇಂಟ್ರಸ್ಟಿಂಗ್ ವಿಚಾರ ಅಂದ್ರೆ ತೆಲುಗು ನಟಿ ಹೇಮಾ ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದಿದ್ದಾಳೆ.
ಅಸಲಿಗೆ ಸಿಸಿಬಿ ಪೊಲೀಸರಿಗೆ ಆಕೆ ನಟಿ ಅನ್ನೋದೆ ಗೊತ್ತಾಗಿರ್ಲಿಲ್ಲ. ನಾರ್ಮಲ್ ಆಗೇ ಸಿಸಿಬಿ ಪೊಲೀಸ್ರು ಎಲ್ಲರನ್ನ ವಿಚಾರಿಸುವಂತೆ ಹೇಮಾಳನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೊಲೀಸ್ರ ಮುಂದೆ ಹೇಮಾ ನಾನು ದೊಡ್ಡ ನಟಿ ಸಾವಿರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಿನಿ ಅಂತ ಬಿಲ್ಡಪ್ ಕೊಟ್ಟಿದ್ದಾಳೆ. ಈ ವೇಳೆ ಪೊಲೀಸ್ರು ಪರಿಶೀಲನೆ ಮಾಡಿದಾಗ ಆಕೆ ನಟಿ ಅನ್ನೋದು ಪತ್ತೆಯಾಗಿದೆ. ಇನ್ನೂ ಜಿಆರ್ ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ ಶನಿವಾರ ರಾತ್ರಿಯಿಂದಲೇ ಶುರುವಾಗಿದೆ. ಒಂದು ದಿನ ಪಾರ್ಟಿ ಆದ ಬಳಿಕ ಸಿಸಿಬಿ ಪೊಲೀಸರಿಗೆ ವಿಚಾರ ತಿಳಿದು ರೈಡ್ ಮಾಡಲಾಗಿದೆ.
500 Note Update: ನಿಮ್ಮ ಬಳಿ 500 ರೂಪಾಯಿ ನೋಟು ಇದ್ಯಾ..? ಕ್ಷಣಮಾತ್ರದಲ್ಲಿ ನೀವು ಆಗ್ಬೋದು ಮಿಲಿಯನೇರ್
ಒಂದು ದಿನದ ಮುಂಚೆಯೇ ಇಷ್ಟು ದೊಡ್ಡ ಮಟ್ಟದ ರೇವ್ ಪಾರ್ಟಿ ಆಯೋಜನೆಯಾದ್ರು ಹೆಬ್ಬಗೋಡಿ ಪೊಲೀಸರಿಗೆ ಮಾತ್ರ ಈ ವಿಚಾರ ಗೊತ್ತಾಗಿಲ್ಲ. ಸ್ಥಳೀಯ ಮಟ್ಟದಲ್ಲಿ ಏನಾಗ್ತಿದೆ ಅನ್ನೋದು ಪೊಲೀಸರಿಗೆ ಮಾಹಿತಿ ಇಲ್ವಾ ಅನ್ನೋ ಪ್ರಶ್ನೆ ಮೂಡಿದೆ. ಇನ್ನೂ ಬೀಟ್ ಇನ್ಚಾರ್ಜ್ ಆಗಿದ್ದ ಎಎಸ್ ಐ ನಾರಯಣಸ್ವಾಮಿ, ಬೀಟ್ ಕಾನ್ಟೇಬಲ್ ದೇವರಾಜು ಹಾಗೂ ಎಸ್ ಬಿ ಕಾನ್ಸ್ಟೇಬಲ್ ಗಿರೀಶ್ ರನ್ನ ಬೆಂಗಳೂರು ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಎರಡು ದಿನ ಪಾರ್ಟಿ ನಡೆದಿರೋ ಸ್ಥಳೀಯ ಪೊಲೀಸರಿಗಿಲ್ಲ ಮಾಹಿತಿ ಇರದ ಹಿನ್ನಲೆ ಸಿಬ್ಬಂದಿ ಮೇಲೆ ಎಸ್ಪಿ ಶಿಸ್ತು ಕ್ರಮ ಕೈಗೊಂಡಿದ್ದಾರೆ.
ಇನ್ನೂ ವಿಪರ್ಯಾಸವೆಂದರೆ ಪಾರ್ಟಿ ನಡೆದ ದಿನ ಹೆಬ್ಬಗೋಡಿ ಇನ್ಸ್ಪೆಕ್ಟರ್ ಐಯಣ್ಣ ರೆಡ್ಡಿ ಮತ್ತು ಡಿವೈಎಸ್ಪಿ ಮೋಹನ್ ಕುಮಾರ್ ನೈಟ್ ರೌಂಡ್ ಇದ್ದರು. ಆದರೆ ಪಾರ್ಟಿ ಬಗ್ಗೆ ಮಾಹಿತಿ ಪಡೆಯದ ಹಿನ್ನೆಲೆ ಯಲ್ಲಿ ಡಿವೈಎಸ್ಪಿ ಹಾಗೂ ಇನ್ಸಪೆಕ್ಟರ್ ಗೂ ಎಸ್ಪಿ ಚಾರ್ಜ್ ಮೆಮೋ ನೀಡಿದ್ದಾರೆ. ಎರಡು ದಿನ ಪಾರ್ಟಿ ನಡೆದ್ರು ನಿಮ್ಮ ಗಮನಕ್ಕೆ ಯಾಕೆ ಬಂದಿಲ್ಲ ಇದಕ್ಕೆ ಕಾರಣ ನೀಡಿ ಎಂದು ಎಸ್ಪಿ ಚಾರ್ಜ್ ಮೆಮೋ ನೀಡಿದ್ದಾರೆ. ಇನ್ನೂ ಮೂಲಗಳ ಮಾಹಿತಿ ಪ್ರಕಾರ ರೇವ್ ಪಾರ್ಟಿ ಆಯೋಜಕರು ಪಾರ್ಟಿ ಪರ್ಮಿಷನ್ ಗಾಗಿ ಪರಪ್ಪನ ಅಗ್ರಹಾರ ಪೊಲೀಸ್ರನ್ನ ಸಂಪರ್ಕ ಮಾಡಿ ಬರ್ತಡೆ ಪಾರ್ಟಿ ಅಂತ ಪರ್ಮಿಷನ್ ಕೇಳಿದ್ದಾರೆ.
ಬರ್ತಡೇ ಪಾರ್ಟಿ ತಾನೆ ಅಂತ ಪರಪ್ಪನ ಅಗ್ರಹಾರ ಪೊಲೀಸ್ರು ಸ್ಪಾಟ್ ವೆರಿಫಿಕೇಷನ್ ಮಾಡಿ ಬಾಯಿ ಮಾತಲ್ಲೇ ಪಾರ್ಟಿ ಮಾಡಿಕೊಳ್ಳಿ ಅಂತ ಹೇಳಿ ಕಳುಹಿಸಿದ್ದಾರೆ ಎಂದು ಹೇಳಲಾಗ್ತಿದೆ. ಒಟ್ಟಾರೆಯಾಗಿ ಸಿಸಿಬಿ ಒಂದು ಕಡೆ ತನಿಖೆ ಚುರುಕುಗೊಳಿಸಿದರೆ, ಮತ್ತೊಂದು ಕಡೆ ಪೊಲೀಸರ ಯಡವಟ್ಟು ಎದ್ದು ಕಾಣುತ್ತಿದೆ. ಮುಂದಿನ ದಿನಮಾಗಳಲ್ಲಿ ತನಿಖೆ ಯಾವ ಹಂತಕ್ಕೆ ಹೋಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.