ಬೆಂಗಳೂರು: ಹೆಬ್ಬಗೋಡಿಯಲ್ಲಿ ರೇವ್ ಪಾರ್ಟಿ ಪ್ರಕರಣ ಕೇಸ್ ಸಂಬಂಧ ತನಿಖೆ ನಡೆಸಿದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿದೆ.
ಹೌದು .. ಆರ್ ಟಿ ಐ ಕಾರ್ಯಕರ್ತ ವಿಜಯ್ ಡೆನ್ನಿಸ್ ಎನ್ನುವವರಿಂದ ದೂರು ನೀಡಲಾಗಿದ್ದು ತನಿಖೆ ವೇಳೆ ಪಾರ್ಟಿಯಲ್ಲಿ ಭಾಗಿಯಾದವರಿಗೆ ಸುಲಿಗೆ ಆರೋಪ ಹಾಗೆ ಚಾರ್ಜ್ ನಲ್ಲಿ ಕೆಲವು ಆರೋಪಿಗಳ ಪಾತ್ರ ಡಮ್ಮಿ ಮಾಡಲು ಹಣ ಕೇಳಿದ ಆರೋಪ ವಿರುದ್ಧ ದೂರು ನೀಡಲಾಗಿದೆ.
ಪ್ರಕರಣದ ಎ2 ಆರೋಪಿ ಅರುಣ್ ಕುಮಾರ್ ಎಂಬಾತನಿಗೆ 5 ಕೋಟಿಗೆ ಡಿಮ್ಯಾಂಡ್ ಆರೋಪ ಜೊತೆಗೆ ತನಿಖೆ ವೇಳೆ ಹಲವು ಲೋಪ ನಡೆದಿದೆ ಎಂದು ಆರೋಪಿಸಿ ದೂರು ಕ್ಯಾಚ್ ಅಪ್ ಪಬ್ ಮಾಲೀಕ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆಗೆ ಮನವಿ ಮಾಡಲಾಗಿದೆ.